ರೇಬಿಸ್ ವ್ಯಾಕ್ಸಿನೇಷನ್ ಶಿಬಿರದಲ್ಲೇ ಹುಚ್ಚು ನಾಯಿ ಹುಚ್ಚಾಟ!

(ನ್ಯೂಸ್ ಕಡಬ) newskadaba.com ತಮಿಳುನಾಡು, ಡಿ. 28. ರೇಬಿಸ್​ ಶಿಬಿರದ ವೇಳೆ ಹುಚ್ಚು ನಾಯಿಯೊಂದು ಜನರ ಮೇಲೆ ಹಾಗೂ ಇತರ ನಾಯಿಗಳ ಮೇಲೆ ದಾಳಿ ನಡೆಸಿದ ಘಟನೆ ತಮಿಳುನಾಡಿನ ಕೃಷ್ಣಗಿರಿಯ ಪಿಆರ್​ಸಿ ಶಾಲಾ ಆವರಣದಲ್ಲಿ ನಡೆದಿದೆ.

 

ರೇಬಿಸ್ ಶಿಬಿರಕ್ಕೆ ಸಾಕಷ್ಟು ಸಾಕು ನಾಯಿಗಳನ್ನು ಕರೆತರಲಾಗಿತ್ತು. ಈ ವೇಳೆ ಲಸಿಕೆ ಹಾಕಲು ತಂದಿದ್ದ ನಾಯಿಯೊಂದು ಹುಚ್ಚೆದ್ದು ರಂಪಾಟ ಮಾಡಿ, ಸ್ಥಳದಲ್ಲಿದ್ದ ಇತರೆ ನಾಯಿಗಳಿಗೆ ಕಚ್ಚಿದೆ. ಅಲ್ಲದೇ ಹುಚ್ಚು ಹಿಡಿದಂತೆ ದಾಂಧಲೆ ನಡೆಸಿದ ನಾಯಿಯನ್ನು ಬಿಡಿಸಲು ಮುಂದಾದ ಜನರ ಮೇಲೂ ನಾಯಿ ದಾಳಿ ನಡೆಸಿದೆ ಎಂದೆನ್ನಲಾಗಿದೆ.

Also Read  ತಮಿಳುನಾಡಿಗೆ ಕಾವೇರಿ ನೀರು ಹರಿಸಲು ನಿರ್ಧರಿಸಿದೆ ಕರ್ನಾಟಕ

error: Content is protected !!
Scroll to Top