ಕೊಯ್ನಾಡಿನಲ್ಲಿ ಆನೆಗಳ ಹಿಂಡು  ➤ ದಿಕ್ಕಾಪಾಲಾಗಿ ಓಡಿದ ಯುವಕರು

(ನ್ಯೂಸ್ ಕಡಬ) newskadaba.com ಕೊಯ್ನಾಡು, ಡಿ. 27. ಕೊಯ್ನಾಡು ಸಮೀಪದ ಮಾಣಿ – ಮೈಸೂರು ಹೆದ್ದಾರಿ ಬಳಿ ಪಯಸ್ವಿನಿ ನದಿಯ ತೀರಕ್ಕೆ ಸ್ನಾನಕ್ಕೆಂದು ಕೆಲವು ಯುವಕರು ಬಂದಿದ್ದ, ಸಂಧರ್ಭ ಉನೈಸ್ ಪೆರಾಜೆ ಎಂಬವರು ನದಿಯ ತಟದಲ್ಲಿ ಯಾತ್ರಿಕರು ಬಂದು ಬಿಸಾಕಿದ್ದ ಕಸದ ವಿಡಿಯೋವನ್ನು ಚಿತ್ರೀಕರಿಸುತ್ತಿದ್ದರು ಎನ್ನಲಾಗಿದೆ.

ಈ ವೇಳೆ ಕಾಡಿನಿಂದ ಏಕಾಏಕಿ ಆನೆಗಳ ಹಿಂಡೊಂದು ಇವರ ಬಳಿ ಬರುತ್ತಿದ್ದುದನ್ನು ಗಮನಿಸಿದರು, ಕೂಡಲೇ ಅವರು ಅಲ್ಲಿಂದ ಓಟಕಿತ್ತರು ಎಂದು ತಿಳಿದುಬಂದಿದೆ. ನಂತರ ದೂರದಲ್ಲಿ ನಿಂತು ಆನೆಗಳ ಹಿಂಡಿನ ವಿಡಿಯೋವನ್ನು ತೆಗೆದು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದಾರೆ ಎಂದು ತಿಳಿದುಬಂದಿದೆ.

Also Read  ಮಂಗಳೂರು ವೈಭವದ ದಸರಾ ಆಚರಣೆಗೆ ಅಡ್ಡಿಯಾಗುತ್ತಾ ಕೊರೋನಾ..?

 

error: Content is protected !!
Scroll to Top