ಮಂಗಳೂರು: ವಾಹನ ಸಂಚಾರ ನಿಷೇಧ ➤ ಸವಾರರ ಪರದಾಟ

section 144

(ನ್ಯೂಸ್ ಕಡಬ) newskadaba.com ಮಂಗಳೂರು, ಡಿ. 26. ಶನಿವಾರದಂದು ರಾತ್ರಿ ಕಾಟಿಪಳ್ಳದಲ್ಲಿ ನಡೆದ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ, ಸುರತ್ಕಲ್ ಜಂಕ್ಷನ್‌ನಲ್ಲಿ ಪೊಲೀಸರು ಸೆಕ್ಷನ್ ಹಾಕಿದ್ದು, ಸಾರ್ವಜನಿಕರು ಪರದಾಡುವಂತಾಗಿದೆ.

ವಾಹನ ನಿಲುಗಡೆ, ಓಡಾಟ ಹಾಗೂ ಭಾನುವಾರದಂದು ಜಲೀಲ್ ಅವರ ಪಾರ್ಥಿವ ಶರೀರ ಕೊಂಡೊಯ್ಯಲು ಸುರತ್ಕಲ್ ಜಂಕ್ಷನ್ ನಲ್ಲಿ ಪೊಲೀಸರು ವಾಹನ ಸಂಚಾರ ನಿಷೇಧಿಸಿದ್ದು, ಸೋಮವಾರ ಬ್ಯಾರಿಕೇಡ್ ತೆರವುಗೊಳಿಸಿಲ್ಲ, ಪೊಲೀಸರ ಉಪಸ್ಥಿತಿಯೂ ಇಲ್ಲದೇ ವಾಹನ ಸವಾರರು ಪರದಾಡುವಂತಾಗಿದೆ. ಇಂದು ಸುರತ್ಕಲ್ ಜಂಕ್ಷನ್ ಬಂದ್ ಮಾಡಿರುವ ಕಾರಣ ವಾಹನ ದಟ್ಟಣೆ ಹೆಚ್ಚಾಗಿದ್ದು, ಸಾರ್ವಜನಿಕರಿಗೆ ತೊಂದರೆ ಉಂಟಾಗಿದೆ.

Also Read  ಕಡಬ: ಡಾಟಾ ಎಂಟ್ರಿ ಆಪರೇಟರ್ ಮತ್ತು ಡಿ ದರ್ಜೆ ನೇಮಕಾತಿಗೆ ಅರ್ಜಿ ಆಹ್ವಾನ   ➤ ತಕ್ಷಣಕ್ಕೆ ಅಪ್ಲೈ ಮಾಡಿ

error: Content is protected !!
Scroll to Top