ಭಾರತದಲ್ಲೂ ಕೊರೋನಾ ಕೇಸ್ ಕುರಿತು ನಿಗಾ ವಹಿಸಬೇಕು       ➤  ಡಾ. ಸುಧಾಕರ್      

(ನ್ಯೂಸ್ ಕಡಬ) newskadaba.com  ಬೆಂಗಳೂರು, ಡಿ.21 ರಾಜ್ಯದಲ್ಲೂ ಕೊರೋನಾ ಕೇಸ್  ಕುರಿತು ನಿಗಾ ವಹಿಸಿದ್ದೇವೆ, ಚೀನಾದಲ್ಲಿ ಕೊರೋನಾ ಕೇಸ್ ಹೆಚ್ಚುತ್ತಿವೆ. ಸೋಂಕು ಮತ್ತು ಸಾವಿನ ಪ್ರಮಾಣ ಏರುತ್ತಿದೆ. ಭಾರತದಲ್ಲೂ ಮುಂಜಾಗ್ರತೆ ವಹಿಸಬೇಕಿದೆ ಎಂದು ಸಚಿವ ಡಾ. ಸುಧಾಕರ್ ಹೇಳಿದ್ದಾರೆ ಎಂದು ವರದಿ ತಿಳಿಸಿದೆ.

ಈ ಕುರಿತು ಬೆಂಗಳೂರಿನಲ್ಲಿ ಮಾತನಾಡಿದ ಸಚಿವ ಸುಧಾಕರ್, ಕೇಂದ್ರ ಆರೋಗ್ಯ ಸಚಿವರಿಗೆ ಪತ್ರ ಬರೆದಿದ್ದೇನೆ. ಮೂರನೇ ಅಲೆಯ ಆತಂಕ ಎಲ್ಲೆಡೆ ಕಂಡು ಬರುತ್ತಿದೆ. ಚೀನಾ, ಜಪಾನ್ ಸೇರಿ ಹಲವು ದೇಶಗಳಲ್ಲಿ ಸೋಂಕು ಹೆಚ್ಚುತ್ತಿವೆ.

ಸಭೆ ಮಾಡಿ ಯಾವ ರೀತಿ ಕ್ರಮ ಕೈಗೊಳ್ಳಬೇಕು ಎಂದು ನಿರ್ಧರಿಸುತ್ತೇವೆ ಎಂದರು.

 

error: Content is protected !!

Join the Group

Join WhatsApp Group