ಧರ್ಮಸ್ಥಳ: ಕೃಷಿಗಾಗಿ ಡ್ರೋನ್ ಯಂತ್ರದ ಬಿಡುಗಡೆ

(ನ್ಯೂಸ್ ಕಡಬ) newskadaba.com ಬೆಳ್ತಂಗಡಿ, ನ.24. Aerial Vehicle for Agriculture (ಕೃಷಿಗಾಗಿ ಬಾನ ವಾಹನಗಳು) ಎಂಬ ಸಂಶೋಧನೆಯ ಒಂದು ಮಾಡೆಲ್ ಡ್ರೋನ್ ಅನ್ನು ಇಂದು ಧರ್ಮಸ್ಥಳದ ವಸಂತ ಮಹಲ್ ನಲ್ಲಿ ಗುರುವಾರದಂದು ನಡೆದ ಕಾರ್ಯಕ್ರಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಪೂಜ್ಯ ಡಾ.ವೀರೇಂದ್ರ ಹೆಗ್ಗಡೆಯವರು ಬಿಡುಗಡೆಗೊಳಿಸಿದರು.

ಪ್ರಧಾನಿ ಮೋದಿಯವರ ಕನಸಿನ ಸ್ಟಾರ್ಟ್ ಅಪ್ ಇಂಡಿಯಾ ಹಾಗೂ ಸ್ಟಾರ್ಟ್ ಅಪ್ ಕರ್ನಾಟಕ ಇವುಗಳ ಅನುದಾನದಿಂದ ಆರಂಭವಾದ ದಕ್ಷಿಣ ಕನ್ನಡ ಜಿಲ್ಲೆಯ ಮೊದಲ ಸ್ಟಾರ್ಟ್ ಅಪ್ ಸಂಸ್ಥೆ “ISPAGRO”.

ಕಾರ್ಯಕ್ರಮದಲ್ಲಿ ವಿಜಯ ರಾಘವ ಪಡ್ವೆಟ್ನಾಯ, ಬಿಜೆಪಿ ದಕ್ಷಿಣ ಕನ್ನಡ ಜಿಲ್ಲಾ ಯುವಮೋರ್ಚಾ ಅಧ್ಯಕ್ಷ ಹರೀಶ್ ಪೂಂಜಾ, ಕ್ಯಾಂಪ್ಕೋ ಅಧ್ಯಕ್ಷ ಸತೀಶ್ ಚಂದ್ರ ಮೊದಲಾದವರು ಉಪಸ್ಥಿತರಿದ್ದರು.

Also Read  ತೊಡಿಕಾನ: ಭಾರಿ ಗಾತ್ರದ ಗೋಲಿ ಮರವೊಂದು ಮನೆ ಮೇಲೆ ಬಿದ್ದು ಸಂಪೂರ್ಣ ಹಾನಿ ➤ಮನೆ ಮಂದಿಯೆಲ್ಲ ಪವಾಡ ಸದೃಶವಾಗಿ ಪಾರು

error: Content is protected !!
Scroll to Top