ಸಿ.ಟಿ ರವಿ ಪ್ಲೆಕ್ಸ್ ಹರಿದು ಹಾಕಿದ ಕಿಡಿಗೇಡಿಗಳು

(ನ್ಯೂಸ್‌ ಕಡಬ) newskadaba.com ಚಿಕ್ಕಮಂಗಳೂರು, ಡಿ. 16. ಇಲ್ಲಿ ಎರಡು ದಿನಗಳ ಕಾಲ ರಾಜ್ಯಮಟ್ಟದ ಯುವಜನೋತ್ಸವ ನಡೆಯುತ್ತಿದ್ದು, ಅದಕ್ಕಾಗಿ ಚಿಕ್ಕಮಂಗಳೂರು ನಗರದ ಹನುಮಂತ ವೃತ್ತದ ಬಳಿ ಸಿ.ಟಿ ರವಿ, ನಗರಸಭೆ ಅಧ್ಯಕ್ಷ ವೇಣುಗೋಪಾಲ ಸೇರಿದಂತೆ ಹಲವಾರು ಮುಖಂಡರ ಪ್ಲೆಕ್ಸ್ ಅಳವಡಿಸಲಾಗಿತ್ತು.

ಇದರಲ್ಲಿ ಸಿ.ಟಿ ರವಿ ಹಾಗೂ ಮುಖಂಡರ ಭಾವಚಿತ್ರವನ್ನು ಕಿಡಿಗೇಡಿಗಳು ಬ್ಲೇಡ್ ನಿಂದ ಹರಿದು ಹಾಕಿದ್ದಾರೆ. ಈ ಸಂಬಂಧ ಡಿ.ವೈ.ಎಸ್.ಪಿ ಪುರುಷೋತ್ತಮ್, ನಗರದ ಠಾಣೆ ಪಿಎಸ್ ಐ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

error: Content is protected !!
Scroll to Top