ಮತ್ತೆ ಹೆಚ್ಚಾದ ಬೀದಿ ನಾಯಿಗಳ ಹಾವಳಿ ➤ ಜನರಲ್ಲಿ ಆತಂಕ

(ನ್ಯೂಸ್ ಕಡಬ) newskadaba.com ಬೆಂಗಳೂರು ,ಡಿ .12: ರಾಜ್ಯದಲ್ಲಿ ನಾನಾ ಕಡೆ ಬೀದಿ ನಾಯಿಗಳ ಹಾವಳಿ ಮತ್ತೆ ಹೆಚ್ಚಾಳವಾಗಿದೆ. ಜನಸಾಮಾನ್ಯರು ಒಬ್ಬಂಟಿಯಾಗಿ ಓಡಾಡಲು ಕಷ್ಟಪಡುತ್ತಿದ್ದಾರೆ.

ಕಳೆದ ವಾರ ಬೆಳಗಾವಿ ಯಲ್ಲಿ 12 ವರ್ಷದ ಬಾಲಕಿಯೊಬ್ಬಳು ಶಾಲೆಯಿಂದ ವಾಪಸಾಗುತ್ತಿದ್ದ ವೇಳೆ ನಾಯಿಗಳು ದಾಳಿ ನಡೆಸಿದೆ . ಈ ದಾಳಿಗೆ ಬಾಲಕಿ ಬಲಿಯಾಗಿದ್ದಳು , ಭದ್ರಾವಾತಿಯಲ್ಲಿ ಬೀದಿನಾಯಿಗಳ ಹಿಂಡು ಮೂರು ವರ್ಷದ ಬಾಲಕನ ಮೇಲೆ ದಾಳಿ ನಡೆಸಿದ ಪರಿಣಾಮ ಆ ಬಾಲಕ ಮೃತಪಟ್ಟಿದ್ದಾನೆ. ಶಿವಮಮೊಗ್ಗದ ಪುರಲೆಯಲ್ಲಿಯೂ ಬಾಲಕಿಯೊಬ್ಬಳ ಮೇಲೆ ಬೀದಿ ನಾಯಿಗಳು ದಾಳಿ ನಡೆಸಿವೆ. ಇನ್ನೂ ಗದಗದಲ್ಲಿ ಬೀದಿ ನಾಯಿಗಲು ಕಚ್ಚಿದ ಪರಿಣಾಮ ಮಗುವಿನ ಕುತ್ತಿಗೆ 15 ಹೊಲಿಗೆ ಹಾಕಿಸಿದ್ದು ಬೆಳಕಿಗೆ ಬಂದಿದೆ .  ಇದಿಷ್ಟು ಬೆಳಗಿಗೆ ಬಂದ ಪ್ರಕರಣಗಳು , ಬೀದಿ ನಾಯಿಗಳು ಜನರ ಮೇಲೆ ಅದರಲ್ಲಿ ವಿಶೇಷವಾಗಿ ಮಹಿಳೆಯರ ಮೇಲೆ ಮತ್ತು ಮಕ್ಕಳು ಹಾಗೂ ತಡರಾತ್ರಿ ಬೈಕ್ ಸವಾರರ ಮೇಲೆ ದಾಳಿ ಮಾಡುವ ಘಟನೆಗಳು ರಾಜ್ಯಾದ್ಯಂತ ಹೆಚ್ಚಾಗಿದೆ.

error: Content is protected !!

Join the Group

Join WhatsApp Group