ಭೀಕರ ರಸ್ತೆ ಅಪಘಾತ ➤ ಐದು ಮಂದಿ ಮೃತ್ಯು

(ನ್ಯೂಸ್ ಕಡಬ) newskadaba.com ನಾಗಮಂಗಲ,ಡಿ.12. ಬೆಂಗಳೂರು ಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಎರಡು ಕಾರುಗಳ ನಡುವೆ ಢಿಕ್ಕಿಸಂಭವಿಸಿದ ಪರಿಣಾಮ ಮೂವರಿಗೆ ಗಂಭೀರ ಗಾಯ ವಾಗಿದ್ದು, ಐದು ಮಂದಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎನ್ನಲಾಗಿದೆ .

ಬೆಂಗಳೂರಿನಿಂದ ಮದುವೆ ಸಮಾರಂಭ ಮುಗಿಸಿಕೊಂಡು ಹಾಸನದ ಕಡೆಗೆ ತೆರಲುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ. ಮೃತಪಟ್ಟವರನ್ನು ಹಾಸನ ಮೂಲದ ಶ್ರೀನಿವಾಸ ಮೂರ್ತಿ (74),ಪ್ರಭಾಕರ್ (75), ಜಯಂತಿ (60),ಚೈನೈ ಮೂಲದ ಕಿಶೋರ್ (25)  ಎಂದು ಗುರುತಿಸಲಾಗಿದೆ.  ಗೌತಮ್, ಕೆವಿನ್, ಶಬ್ರೀಶ್ ಹಾಗೂ ಮತ್ತಿಬ್ಬರಿಗೆ ಆದಿಚುಂಚನಗಿರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಸುದ್ದಿ ತಿಳಿದು ಸ್ಥಳಕ್ಕೆ ಬಿಂಡಿಗನವಿಲೆ ಪೊಲೀಸ್ ಠಾಣೆಯ ಶ್ರೀಧರ್ ನೇತೃತ್ವದ ಸಿಬ್ಬಂದಿಗಳು ಭೇಟಿ ನೀಡಿದ್ದಾರೆ. ಎಂದು ತಿಳಿದು ಬಂದಿದೆ.

error: Content is protected !!

Join the Group

Join WhatsApp Group