ಗಾಂಜಾ ಸೇವಿಸಿ, ತಲವಾರ್ ತೋರಿಸಿ ಬೆದರಿಕೆ ➤ ಆರೋಪಿ ಅರೆಸ್ಟ್

(ನ್ಯೂಸ್ ಕಡಬ) newskadaba.com ವಿಟ್ಲ, ಡಿ. 08. ಹಾಡಹಗಲೇ ವ್ಯಕ್ತಿಯೋರ್ವರಿಗೆ ತಲವಾರು ತೋರಿಸಿ ಬೆದರಿಕೆ ಹಾಕಿದ ಆರೋಪಿಯನ್ನು ಬಂಧಿಸಿದ ಘಟನೆ ಉರಿಮಜಲು ಜಂಕ್ಷನ್ ನಲ್ಲಿ ನಡೆದಿದೆ.

ಬಂಧಿತನನ್ನು ರವೂಫ್ ಉರಿಮಜಲು ಎಂಬವರ ಪುತ್ರ ಆಫೀಲ್ ಎಂದು ಗುರುತಿಸಲಾಗಿದೆ. ಗಾಂಜಾ ಸೇವಿಸಿದ್ದ ಈತ ಸಾರ್ವಜನಿಕ ಸ್ಥಳದಲ್ಲಿ ತಲವಾರು ಝಲಪಿಸಿ, ಸಾರ್ವಜನಿಕರಿಗೆ ಭಯ ಹುಟ್ಟಿಸುವ ವಾತಾವರಣ ನಿರ್ಮಾಣ ಮಾಡಿದ್ದು, ಈತನನ್ನು ವಿಟ್ಲ ಪೊಲೀಸರು ಬಂಧಿಸಿದ್ದಾರೆ. ಈತ ಈ ಹಿಂದೆ ಅಕ್ರಮ ಗೋ ಸಾಗಾಟದಲ್ಲಿ ಸಿಕ್ಕಿ ಬಿದ್ದಿದ್ದನು. ಇಂದು ಆಫೀಲ್ ತಲವಾರು ಹಿಡಿದು ಶರೀಫ್ ನನ್ನು ಕಾದು ಕುಳಿತಿದ್ದನು. ಈ ಕುರಿತು ಶರೀಫ್ ನೀಡಿದ ದೂರಿನಂತೆ ಸ್ಥಳಕ್ಕಾಗಮಿಸಿದ ವಿಟ್ಲ ಪೊಲೀಸರು ಬಾರಿ ಗಾತ್ರದ ತಲವಾರು ವಶಕ್ಕೆ ಪಡಿಸಿಕೊಂಡಿದ್ದಾರೆ.

error: Content is protected !!
Scroll to Top