ತಂದೆಯಿಂದಲೇ ಗುಂಡಿಗೆ ಬಲಿಯಾದ ಆಯುಷಿ!

ಕಳೆದ ಶುಕ್ರವಾರ ಮಥುರಾದ ಯಮುನಾ ಎಕ್ಸ್‌ಪ್ರೆಸ್‌ ವೇ ಸರ್ವಿಸ್ ರಸ್ತೆಯಲ್ಲಿ ಟ್ರಾಲಿ ಬ್ಯಾಗ್‌ ವೊಂದರಲ್ಲಿ  25 ವರ್ಷದ ಆಯುಷಿ ಚೌಧರಿ ಅವರ ಮೃತದೇಹ ಪತ್ತೆಯಾಗಿತ್ತು. ಇದು ಮರ್ಯಾದಾ ಹತ್ಯೆಯಿಂದಾಗಿರುವುದಾಗಿ ತಿಳಿದುಬಂದಿದೆ.

ಲಖನೌ: ಕಳೆದ ಶುಕ್ರವಾರ ಮಥುರಾದ ಯಮುನಾ ಎಕ್ಸ್‌ಪ್ರೆಸ್‌ ವೇ ಸರ್ವಿಸ್ ರಸ್ತೆಯಲ್ಲಿ ಟ್ರಾಲಿ ಬ್ಯಾಗ್‌ ವೊಂದರಲ್ಲಿ  25 ವರ್ಷದ ಆಯುಷಿ ಚೌಧರಿ ಅವರ ಮೃತದೇಹ ಪತ್ತೆಯಾಗಿತ್ತು. ಇದು ಮರ್ಯಾದಾ ಹತ್ಯೆಯಿಂದಾಗಿರುವುದಾಗಿ ತಿಳಿದುಬಂದಿದೆ. ಈ ಸಂಬಂಧ  ಉತ್ತರ ಪ್ರದೇಶ ಪೊಲೀಸರು ಇಂದು (ಮಂಗಳವಾರ) ಆಕೆಯ ಪೋಷಕರನ್ನು ಮಥುರಾದಲ್ಲಿ ಬಂಧಿಸಿದ್ದಾರೆ.

ದಕ್ಷಿಣ ದೆಹಲಿಯ ಬದರ್‌ಪುರದಲ್ಲಿ ನೆಲೆಸಿದ್ದ ಆಯುಷಿಯನ್ನು ಆಕೆಯ ತಂದೆ ನಿತೇಶ್ ಯಾದವ್ ಹತ್ಯೆಗೈದಿದ್ದಾರೆ ಎಂದು ಉತ್ತರ ಪ್ರದೇಶ ಪೊಲೀಸರು ಸೋಮವಾರ ತಿಳಿಸಿದ್ದಾರೆ. ಆಕೆ ಬೇರೆ ಜಾತಿಯ ಹುಡುಗನನ್ನು ಮದುವೆಯಾಗಿದ್ದರಿಂದ ಈ ಹತ್ಯೆ ನಡೆಸಲಾಗಿದೆ.

error: Content is protected !!

Join the Group

Join WhatsApp Group