ಗಂಧದಗುಡಿ ಟಿಕೆಟ್​ ವಿನಾಯಿತಿ ಘೋಷಣೆ ಮಾಡಿದ ಅಶ್ವಿನಿ ಪುನೀತ್​​ ರಾಜ್​​ಕುಮಾರ್

(ನ್ಯೂಸ್ ಕಡಬ) newskadaba.com ಬೆಂಗಳೂರು ನ.07: ಪುನೀತ್​​ ರಾಜ್​​ಕುಮಾರ್​ ಅವರ ‘ಗಂಧದಗುಡಿ’ ಟಿಕೆಟ್​ ವಿನಾಯಿತಿ ದರದಲ್ಲಿ ಸಿಗಲಿವೆ. ಖುದ್ದು ಪುನೀತ್​ ಪತ್ನಿ ಅಶ್ವಿನಿ ಈ ಘೋಷಣೆ ಮಾಡಿದ್ದಾರೆ. ಇಂದಿನಿಂದ ಗುರುವಾರದವರೆಗೂ ವಿನಾಯಿತಿ ರೂಪದಲ್ಲಿ ‘ಗಂಧದಗುಡಿ’ ಟಿಕೆಟ್ ಸಿಗಲಿವೆ.


ಥಿಯೇಟರ್​​ಗಳಲ್ಲಿ 56 ರೂಪಾಯಿ, ಮಲ್ಟಿಪ್ಲೆಕ್ಸ್​ಗಳಲ್ಲಿ 112 ರೂಪಾಯಿಗೆ ಟಿಕೆಟ್​ ದರ ಇರಲಿದೆ. ಕನ್ನಡಿಗರೆಲ್ಲರೂ ಮಕ್ಕಳೊಂದಿಗೆ ನೋಡಲು ಈ ವ್ಯವಸ್ಥೆ ಮಾಡಲಾಗಿದೆ. ಸೋಮವಾರದಿಂದ ಗುರುವಾರದವರೆಗೂ ಡಿಸ್ಕೌಂಟ್ ನೀಡಲಾಗಿದೆ.

error: Content is protected !!

Join the Group

Join WhatsApp Group