ಕಡಬ: ಹನಿಟ್ರ್ಯಾಪ್ ಪ್ರಕರಣಕ್ಕೆ ಟ್ವಿಸ್ಟ್ ➤‌ ಕಡಬ ಠಾಣೆಯಲ್ಲಿ ದೂರು ದಾಖಲು

(ನ್ಯೂಸ್ ಕಡಬ) newskadaba.com ಕಡಬ, ಅ.06. ಠಾಣಾ ವ್ಯಾಪ್ತಿಯ ಮರ್ಧಾಳ ಎಂಬಲ್ಲಿ ನಡೆದಿತ್ತೆನ್ನಲಾದ ಶಂಕಿತ ಹನಿಟ್ರ್ಯಾಪ್ ಘಟನೆಗೆ ತಿರುವು ದೊರೆತಿದ್ದು, ಕಡಬ ಠಾಣೆಯಲ್ಲಿ ದರೋಡೆ ಪ್ರಕರಣ ದಾಖಲಾಗಿದೆ.

ಮಂಗಳೂರು ಬಜಾಲ್ ನಿವಾಸಿ ಉಮರಬ್ಬ ಎಂಬವರ ಪುತ್ರ ಅಜರುದ್ದೀನ್(32) ಎಂಬಾತ ತನ್ನ ಸ್ನೇಹಿತ ರಮೇಶ್ ಎಂಬವರ ಭೇಟಿಗಾಗಿ ಮರ್ಧಾಳಕ್ಕೆ ಆಗಮಿಸಿದ್ದು, ರಮೇಶ್ ಸಿಗದ ಹಿನ್ನೆಲೆಯಲ್ಲಿ ಹಿಂತಿರುಗಿ ಹೋಗುವ ವೇಳೆ ಮಿತ್ತೋಡಿ ಎಂಬಲ್ಲಿ ಮೂವರು ಅಪರಿಚಿತ ಯುವಕರ ತಂಡ ಅಡ್ಡಗಟ್ಟಿ ಹಣ, ಮೊಬೈಲ್ ಹಾಗೂ ಬೈಕ್ ದರೋಡೆ ಮಾಡಿರುವುದಾಗಿ ಕಡಬ ಠಾಣೆಗೆ ದೂರು ನೀಡಿದ್ದಾರೆ. ಈ ಬಗ್ಗೆ ಆರೋಪಿಗಳ ವಿರುದ್ಧ ಕಡಬ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಪತ್ತೆಗಾಗಿ ಬಲೆ ಬೀಸಲಾಗಿದೆ.

Also Read  ಕಾರ್ ಸ್ಟ್ರೀಟ್ ಸರಕಾರಿ ಕಾಲೇಜಿನಲ್ಲಿ "ಬಿಸಿನೆಸ್ ಲ್ಯಾಬ್" ಶೀಘ್ರ ಆರಂಭ

 

error: Content is protected !!
Scroll to Top