ಮಂಗಳೂರು: 2 ಲಕ್ಷ ರೂ. ಸಾಲ ಪಡೆದು ನಾಪತ್ತೆಯಾದ ಯುವಕ ➤‌ ತಂದೆಯಿಂದ ದೂರು ದಾಖಲು

(ನ್ಯೂಸ್ ಕಡಬ) newskadaba.com ಮಂಗಳೂರು, ಸೆ. 13. ಹಣವಿದ್ದ ಬ್ಯಾಗ್‌ನೊಂದಿಗೆ ಹೋದ ಯುವಕ ಮನೆಗೂ ಬಾರದೆ, ಕೆಲಸಕ್ಕೂ ಹಾಜರಾಗದೇ ನಾಪತ್ತೆಯಾದ ಘಟನೆ ವರದಿಯಾಗಿದೆ.

ನಾಪತ್ತೆಯಾದ ಯುವಕನನ್ನು ನಗರದ ಮಾಯಾ ಟ್ರೇಡರ್ಸ್‌ನಲ್ಲಿ ಉದ್ಯೋಗಿಯಾಗಿರುವ ಕೃಷ್ಣ ಶೆಣೈ (23) ಎಂದು ಗುರುತಿಸಲಾಗಿದೆ. ಈತ ಮೂರು ತಿಂಗಳಿಂದ ಮಾಯಾ ಟ್ರೇಡರ್ಸ್‌ನಲ್ಲಿ ಕೆಲಸ ಮಾಡುತ್ತಿದ್ದು, ಕೆಲವರಿಂದ ಸಾಲ ಪಡೆದಿದ್ದು, ಇದನ್ನು ತೀರಿಸುವ ಸಲುವಾಗಿ ಭುವನೇಂದ್ರ ಬ್ಯಾಂಕ್‌ನಿಂದ ಎರಡು ಲಕ್ಷ ರೂಪಾಯಿ ಸಾಲವನ್ನೂ ಕೂಡಾ ಪಡೆದಿದ್ದ. ಆದರೆ ಆತ ಅಂದಿನಿಂದ ನಾಪತ್ತೆಯಾಗಿದ್ದಾನೆ. ಕೃಷ್ಣ 5 ಅಡಿ 11 ಇಂಚು ಎತ್ತರ, ಗೋಧಿ ಮೈಬಣ್ಣ, ಸ್ಪೋರ್ಟ್ಸ್ ಟ್ರಿಮ್ ಮಾಡಿದ ಗಡ್ಡ, ಸಾಧಾರಣ ಮೈಕಟ್ಟು ಮತ್ತು ಎರಡೂ ಕೈಗಳಲ್ಲಿ ಹಚ್ಚೆ ಹಾಕಿಸಿಕೊಂಡಿದ್ದಾನೆ. ಅವರು ಕನ್ನಡ, ಕೊಂಕಣಿ, ತುಳು, ಹಿಂದಿ ಮತ್ತು ಇಂಗ್ಲಿಷ್ ಭಾಷೆಗಳನ್ನು ಮಾತನಾಡುತ್ತಾರೆ. ಈ ಕುರಿತು ಈತನ ತಂದೆ ಪಾಡುರಂಗ ಶೆಣೈ ನೀಡಿದ ದೂರಿನಂತೆ ಬರ್ಕೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Also Read  ಕಡಬದಲ್ಲಿ ಬಗೆಹರಿಯದ ಬಿಎಸ್ಎನ್ಎಲ್ ನೆಟ್ ವರ್ಕ್ ಸಮಸ್ಯೆ ► ಗ್ರಾಹಕರಿಂದ ಪ್ರತಿಭಟನೆಯ ಕರೆಘಂಟೆ

error: Content is protected !!
Scroll to Top