ನೆಲ್ಯಾಡಿ: ನಿಯಂತ್ರಣ ತಪ್ಪಿ ಕಂದಕಕ್ಕೆ ಬಿದ್ದ ಕಾರು ➤‌ ನಾಲ್ವರಿಗೆ ಗಾಯ

(ನ್ಯೂಸ್ ಕಡಬ) newskadaba.com ನೆಲ್ಯಾಡಿ, ಸೆ. 01. ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ಸೇತುವೆಯಿಂದ ಕಂದಕಕ್ಕೆ ಬಿದ್ದು, ನಾಲ್ವರು ಗಾಯಗೊಂಡ ಘಟನೆ ನೆಲ್ಯಾಡಿ ಸಮೀಪದ ಕೌಕ್ರಾಡಿ ಗ್ರಾಮದ ಕಟ್ಟೆಮಜಲು ಎಂಬಲ್ಲಿ ನಡೆದಿದೆ.


ಗಾಯಗೊಂಡವರನ್ನು ಚಾಲಕ ಕಟ್ಟೆಮಜಲು ನಿವಾಸಿ ರಜನೀಶ್, ಪ್ರಯಾಣಿಕರಾದ ದಯಾನಂದ್, ಭವಿತಾ ಹಾಗೂ ಚೇತನಾ ಎಂದು ಗುರುತಿಸಲಾಗಿದೆ. ಇವರೆಲ್ಲ ನೆಲ್ಯಾಡಿಯಲ್ಲಿ ನಡೆದ ಸಾರ್ವಜನಿಕ ಶ್ರೀ ಗಣೇಶೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಹಿಂತಿರುಗುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆನ್ನಲಾಗಿದೆ.

Also Read  "ಫೆವಿಕಲ್" ಯಕ್ಷಗಾನ ಜಾಹಿರಾತು ವಿರುದ್ದ ಕರಾವಳಿಯಲ್ಲಿ ಆಕ್ರೋಶ ➤ ಜಾಹಿರಾತು ಹಿಂಪಡೆದು ಕರಾವಳಿಗರಲ್ಲಿ ಬಹಿರಂಗವಾಗಿ ಕ್ಷಮೆಗೆ ಶಾಸಕ ಕಾಮತ್ ಆಗ್ರಹ

error: Content is protected !!
Scroll to Top