ಕಾಡುಹಂದಿ ದಾಳಿ ➤‌ ತಂದೆ- ಮಗ ಗಂಭೀರ

(ನ್ಯೂಸ್ ಕಡಬ) newskadaba.com ಕಾಸರಗೋಡು, ಆ. 24. ಕಾಡು ಹಂದಿಗಳ ದಾಳಿಯಿಂದಾಗಿ ತಂದೆ ಮತ್ತು ಮಗ ಗಂಭೀರ ಗಾಯಗೊಂಡ ಘಟನೆ ಬೋವಿಕ್ಕಾನದಲ್ಲಿ ಮಂಗಳವಾರದಂದು ರಾತ್ರಿ ನಡೆದಿದೆ.

ಗಾಯಗೊಂಡವರನ್ನು ಬೋವಿಕ್ಕಾನ ವ್ಯಾಪಾರಿ ಅಬ್ದುಲ್ಲ (57) ಹಾಗೂ ಪುತ್ರ ಫಝಲ್ ರಹಮಾನ್ (24) ಎಂದು ಗುರುತಿಸಲಾಗಿದೆ. ಇವರು ಮಂಗಳವಾರದಂದು ರಾತ್ರಿ ಅಂಗಡಿ ಬಂದ್ ಮಾಡಿ ಸ್ಕೂಟರ್ ನಲ್ಲಿ ಮನೆಗೆ ಮರಳುತ್ತಿದ್ದ ವೇಳೆ ಮುದಲಪ್ಪಾರ ಎಂಬಲ್ಲಿ ಕಾಡು ಹಂದಿಗಳ ತಂಡವು ರಸ್ತೆಗೆ ಅಡ್ಡವಾಗಿ ಬಂದಿದ್ದು, ಇಬ್ಬರ ಮೇಲೆ ದಾಳಿ ನಡೆಸಿದೆನ್ನಲಾಗಿದೆ.

Also Read  ಕಾಲೇಜು ವಿದ್ಯಾರ್ಥಿಗಳಿಗೆ ಬಂಪರ್ ಕೊಡುಗೆ ಪ್ರಕಟಿಸಿದ ಸರಕಾರ ➤ ಪ್ರತಿದಿನ 2 GB ಡಾಟಾ ಫ್ರೀ..‼️

error: Content is protected !!
Scroll to Top