ಟೆರೇಸ್ ಮೇಲೆ ರಾಷ್ಟ್ರಧ್ವಜ ಕಟ್ಟಲೆಂದು ಮೇಲೇರಿದ ಸುಳ್ಯದ ವ್ಯಕ್ತಿ ಜಾರಿ ಬಿದ್ದು ಮೃತ್ಯು

(ನ್ಯೂಸ್ ಕಡಬ) newskadaba.com ಬೆಂಗಳೂರು, ಆ. 15. ಪ್ರತಿ ಮನೆಯಲ್ಲಿ ರಾಷ್ಟ್ರಧ್ವಜ ಹಾರಿಸುವ ಹರ್‌ ಘರ್‌ ತಿರಂಗ್‌ ಅಭಿಯಾನಕ್ಕಾಗಿ ತಮ್ಮ ಮನೆಯಲ್ಲಿ ತಿರಂಗ ಹಾರಿಸಲೆಂದು ಹೋದ ಸುಳ್ಯ ಮೂಲದ ವ್ಯಕ್ತಿಯೋರ್ವ ಜಾರಿ ಬಿದ್ದು ಮೃತಪಟ್ಟ ಘಟನೆ ಬೆಂಗಳೂರಿನ ಹೆಣ್ಣೂರಿನಲ್ಲಿ ನಡೆದಿದೆ.


ಮೃತರನ್ನು ಸುಳ್ಯದ ಅರ್ಚಕ ನಾರಾಯಣ ಭಟ್‌ ಅವರ ಪುತ್ರ ವಿಶ್ವಾಸ್‌ ಕುಮಾರ್‌ ಎಂದು ಗುರುತಿಸಲಾಗಿದೆ. ಖಾಸಗಿ ಕಂಪನಿಯೊಂದರಲ್ಲಿ ಉದ್ಯೋಗಿಯಾಗಿರುವ ಇವರು, ಹೆಣ್ಣೂರು ಎಚ್‌ಬಿಆರ್‌ ಬಡಾವಣೆಯ ಐದನೇ ಬ್ಲಾಕ್‌ನ ಎರಡನೇ ಮಹಡಿಯಲ್ಲಿ ತಾವು ವಾಸಿಸುತ್ತಿದ್ದ ಕಟ್ಟಡದ ಟೇರಸ್‌ ಮೇಲೆ ಧ್ವಜ ಕಟ್ಟಲೆಂದು ಹೋಗಿದ್ದು, ಈ ವೇಳೆ ಅವರು ಕಾಲು ಜಾರಿ ನೆಲಕ್ಕೆ ಬಿದ್ದಿದ್ದಾರೆ. ತಕ್ಷಣವೇ ಅವರನ್ನು ತಂದೆ ಮತ್ತು ಪತ್ನಿ ಸೇರಿ ಆಸ್ಪತ್ರೆಗೆ ಸೇರಿಸಿದರಾದರೂ, ತಲೆಗೆ ಗಂಭೀರ ಗಾಯಗೊಂಡಿದ್ದ ಅವರು ಮೃತಪಟ್ಟಿದ್ದಾರೆನ್ನಲಾಗಿದೆ.

error: Content is protected !!
Scroll to Top