ಕತ್ತುಹಿಸುಕಿ ಕೊಲೆಗೈದ ಸ್ಥಿತಿಯಲ್ಲಿ ಕಾರ್ಮಿಕನ ಮೃತದೇಹ ಪತ್ತೆ..!!!

(ನ್ಯೂಸ್ ಕಡಬ) newskadaba.com ಕಾಸರಗೋಡು, ಆ. 01. ಕಾರ್ಮಿಕನೋರ್ವ ನ ಮೃತದೇಹ ಕತ್ತು ಹಿಸುಕಿ ಕೊಲೆಯಾದ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ಪುಲ್ಲೂರು ಕೆಲೋಟ್ ನಲ್ಲಿ ನಡೆದಿದೆ.


ಮೃತರನ್ನು ಹೆಂಚಿನ ಕಾರ್ಮಿಕ ನೀಲಕಂಠನ್ (36) ಎಂದು ಗುರುತಿಸಲಾಗಿದೆ. ಅವರ ಮೃತದೇಹವು ಇಂದು ಬೆಳಗ್ಗೆ ಮನೆಯೊಳಗೆ ಕೊಲೆಯಾದ ರೀತಿಯಲ್ಲಿ ಪತ್ತೆಯಾಗಿದ್ದು, ಬಳಿಕ ನೀಲಕಂಠನ್ ಜೊತೆಗಿದ್ದ ಗಣೇಶ್ ನಾಪತ್ತೆಯಾಗಿದ್ದಾನೆ ಎನ್ನಲಾಗಿದೆ. ಸ್ಥಳಕ್ಕೆ ಪೊಲೀಸರು ಭೇಟಿನೀಡಿ ಪರಿಶೀಲನೆ ನಡೆಸಿದ್ದಾರೆ.

Also Read  ಕರಾವಳಿಯ ಕೆಲವು ಗ್ರಾಮಗಳಲ್ಲಿ ಇನ್ಮುಂದೆ 24 ಗಂಟೆ ವಿದ್ಯುತ್ ► ಅದರಲ್ಲಿ ನಿಮ್ಮ ಗ್ರಾಮ ಸೇರಿದೆಯೇ ಎಂದು ತಿಳಿಯಬೇಕೇ...?

error: Content is protected !!
Scroll to Top