ಪುತ್ತೂರು: ಬಿಜೆಪಿ ಮುಖಂಡನ ಹತ್ಯೆ ಹಿನ್ನೆಲೆ ➤ ಸ್ಥಳಕ್ಕೆ ಜಿಲ್ಲಾಧಿಕಾರಿ ಬರುವಂತೆ ಒತ್ತಾಯಿಸಿ ಕಾರ್ಯಕರ್ತರಿಂದ ಧರಣಿ

(ನ್ಯೂಸ್ ಕಡಬ) newskadaa.com ಪುತ್ತೂರು, ಜು. 26. ಬಿಜೆಪಿ ಯುವನಾಯಕ ಪ್ರವೀಣ್ ರವರನ್ನು ದುಷ್ಕರ್ಮಿಗಳು ಮಾರಾಕಾಸ್ತ್ರಗಳಿಂದ ಹಲ್ಲೆ ನಡೆಸಿ ಹತ್ಯೆಗೈದ ಹಿನ್ನೆಲೆ ಪುತ್ತೂರಿನಲ್ಲಿ ಅಂಗಡಿ-ಮುಂಗಟ್ಟುಗಳನ್ನು ಬಂದ್ ಮಾಡಲಾಗಿದ್ದು, ಪೇಟೆಯಲ್ಲೆಲ್ಲಾ ಖಾಕಿ ಕಣ್ಗಾವಲು ತೀವ್ರವಾಗಿದೆ.


ಪ್ರವೀಣ್ ರವರ ಮೃತದೇಹವು ಪ್ರಗತಿ ಆಸ್ಪತ್ರೆಯಲ್ಲಿದ್ದು, ಮರಣೋತ್ತರ ಪರೀಕ್ಷೆಗೆ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲು ಸಿದ್ದತೆ ನಡೆಯುತ್ತಿರುವ ಬೆನ್ನಲ್ಲೇ ಸ್ಥಳಕ್ಕೆ ಜಿಲ್ಲಾಧಿಕಾರಿ ಸ್ಥಳಕ್ಕೆ ಆಗಮಿಸಬೇಕು ಎಂದು ಒತ್ತಾಯಿಸಿ ಹಿಂದೂ ಕಾರ್ಯಕರ್ತರು ಆಸ್ಪತ್ರೆ ಮುಂಭಾಗ ಧರಣಿ ಕುಳಿತಿದ್ದಾರೆ.

Also Read  ಈ ಸಣ್ಣ ಕೆಲಸ ಮಾಡುವುದರಿಂದ ನಿಮಗೆ ಜೀವನದಲ್ಲಿ ಬಂದಿರುವ ಎಲ್ಲ ಸಮಸ್ಯೆಗಳು ಪರಿಹಾರ ಆಗುತ್ತದೆ

error: Content is protected !!