ಬೆಳ್ಳಾರೆ: ಗುಡ್ಡೆ ಜರಿತ- SDPI ಕಾರ್ಯಕರ್ತರಿಂದ ಮಣ್ಣು ತೆರವು

(ನ್ಯೂಸ್ ಕಡಬ) newskadaba.com ಬೆಳ್ಳಾರೆ, ಜು. 07. ವಿಪರೀತ ಮಳೆಯಿಂದಾಗಿ ಇಲ್ಲಿನ ವೆಂಕಟ್ರಮಣ ದೇವಸ್ಥಾನ ಸಮೀಪದ ಮುಖ್ಯ ರಸ್ತೆಯ ಬದಿಯಿರುವ ಗುಡ್ಡ ಕುಸಿತದಿಂದಾಗಿ ವಾಹನ ಸಂಚಾರಕ್ಕೆ ಅಡಚಣೆಯಾಗಿದ್ದನ್ನು ಮನಗಂಡ ಎಸ್‌ಡಿಪಿಐ ರೆಸ್ಕ್ಯೂ ತಂಡವು ರಸ್ತೆಯ ಮೇಲಿದ್ದ ಮಣ್ಣನ್ನು ತೆರವುಗೊಳಿಸಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟಿತು.

ಈ ಸಂದರ್ಭದಲ್ಲಿ ಎಸ್‌ಡಿಪಿಐ ಬೆಳ್ಳಾರೆ ಗ್ರಾಮ ಸಮಿತಿ ಅಧ್ಯಕ್ಷ ಶಹೀದ್ ಬೆಳ್ಳಾರೆ, ಉಪಾಧ್ಯಕ್ಷರಾದ ಶಫೀಕ್ ಬೆಳ್ಳಾರೆ, ಕಾರ್ಯದರ್ಶಿ ಜಾಬಿರ್ ಸಿ.ಎಂ, ಬೂತ್ ಅಧ್ಯಕ್ಷರಾದ ಸದ್ದಾಂ, ಆಸಿರ್ ಸ್ಥಳೀಯರಾದ ಅತಾವುಲ್ಲಾ, ಹಾಗೂ ಪಕ್ಷದ ಕಾರ್ಯಕರ್ತರು ತೆರವು ಕಾರ್ಯದಲ್ಲಿ ಭಾಗವಹಿಸಿದ್ದರು.

Also Read  ಬೆಳ್ಳಾರೆ: ಅಪಾಯವನ್ನು ಆಹ್ವಾನಿಸುತ್ತಿರುವ ವಿದ್ಯುತ್ ಕಂಬ

error: Content is protected !!
Scroll to Top