ವಿಟ್ಲ: ಗುಡ್ಡ ಕುಸಿತ ➤ ಕರ್ನಾಟಕ- ಕೇರಳ ಸಂಚಾರ ಬಂದ್…!!

(ನ್ಯೂಸ್ ಕಡಬ) newskadaba.com ವಿಟ್ಲ, ಜು. 05. ಜಿಲ್ಲೆಯಾದ್ಯಂತ ವಿಪರೀತ ಮಳೆ ಸುರಿಯುತ್ತಿದ್ದು, ಕಲ್ಲಡ್ಕ, ಕಾಂಞಂಗಾಡ್ ಅಂತರಾಜ್ಯ ಹೆದ್ದಾರಿಯ ಸಾರಡ್ಕ ಬಳಿ ಗುಡ್ಡ ಕುಸಿದುಬಿದ್ದಿದ್ದು, ಕರ್ನಾಟಕ ಕೇರಳ ಸಂಚಾರ ಬಂದ್ ಆಗಿದೆ.


ಗುಡ್ಡ ಕುಸಿದಿದ್ದರಿಂದ ಪೆರ್ಲ, ಬದಿಯಡ್ಕ, ಕಾಸರಗೋಡು ಸಂಚಾರಕ್ಕೆ ಅಡ್ಡಿಯಾಗಿದೆ. ಅಲ್ಲದೇ ರಸ್ತೆ ಮಧ್ಯದಲ್ಲಿ ದೊಡ್ಡ ರಂಧ್ರ ನಿರ್ಮಾಣವಾಗಿದ್ದು, ರಸ್ತೆಯ ನೀರು ಅದರೊಳಗೆ ಇಳಿಯುತ್ತಿದ್ದು ಸಾರ್ವಜನಿಕರಲ್ಲಿ ಆತಂಕ ಸೃಷ್ಟಿಸಿದೆ.

error: Content is protected !!
Scroll to Top