ಭಾರೀ ಮಳೆ- ಮರವೂರು ಸೇತುವೆಯ ಬಳಿ ರಸ್ತೆ ಬಿರುಕು

(ನ್ಯೂಸ್ ಕಡಬ) newskadaba.com ಮಂಗಳೂರು, ಜೂ. 30. ಮುಂಜಾನೆಯಿಂದ ಧಾರಾಕಾರವಾಗಿ ಮಳೆ ಸುರಿಯುತ್ತಿದ್ದು, ಮರವೂರು ಸೇತುವೆಯ ಬಳಿ ರಸ್ತೆಯು ಬಿರುಕು ಬಿಟ್ಟಿದೆ.


ಈ ಬಗ್ಗೆ ಪ್ರತಿಕ್ರಿಯಿಸಿದ ಜಿಲ್ಕಾಧಿಕಾರಿ, ರಸ್ತೆ ಪರಿಶೀಲನೆಗೆ ಪಿಡಬ್ಲ್ಯುಡಿ ಕಾರ್ಯನಿರ್ವಾಹಕ ಇಂಜಿನಿಯರ್ ಅವರನ್ನು ಸ್ಥಳಕ್ಕೆ ಕಳುಹಿಸಲಾಗಿದೆ. ಈಗಾಗಲೇ ದ.ಕ ಜಿಲ್ಲೆಯಾದ್ಯಂತ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದ್ದು, ಶಿಕ್ಷಣ ಇಲಾಖಾಧಿಕಾರಿಗಳು ತಮ್ಮ ವ್ಯಾಪ್ತಿಯ ಶಾಲಾ ಮಕ್ಕಳ ಸುರಕ್ಷತೆ ಬಗ್ಗೆ ಎಚ್ಚರ ವಹಿಸುವಂತೆ ಸೂಚಿಸಿದ್ದಾರೆ. ಮಳೆ ಹೀಗೇ ಮುಂದುವರಿದರೆ ಶುಕ್ರವಾರ ಬೆಳಗ್ಗಿನ ಪರಿಸ್ಥಿತಿಯನ್ನು ಅವಲೋಕಿಸಿ ಶಾಲೆಗಳಿಗೆ ರಜೆ ನೀಡುವ ಬಗ್ಗೆ ನಿರ್ಧರಿಸಲಾಗುವುದು ಎಂದರು.

Also Read  ಸುಳ್ಯ: ಇಂದು ನಾಳೆ ಮದ್ಯ ಮಾರಾಟ ಕೇಂದ್ರ ಬಂದ್

error: Content is protected !!
Scroll to Top