ಪುತ್ತೂರು: ತೆಂಗಿನ ಸಿಪ್ಪೆಯ ರಾಶಿಗೆ ತಗುಲಿದ ಬೆಂಕಿ ➤ ತಪ್ಪಿದ ಭಾರೀ ಅನಾಹುತ

(ನ್ಯೂಸ್ ಕಡಬ) newskadaba.com ಪುತ್ತೂರು, ಜೂ. 29. ತೆಂಗಿನಕಾಯಿ ಸಿಪ್ಪೆ ಮತ್ತು ಕಟ್ಡಿಗೆಗಳಿಗೆ ಆಕಸ್ಮಿಕವಾಗಿ ಬೆಂಕಿ ತಗುಲಿದ ಘಟನೆ ಕೆಮ್ಮಾಯಿಯಲ್ಲಿ ವರದಿಯಾಗಿದೆ.

ಕೆಮ್ಮಾಯಿ ನಿವಾಸಿ ಇಬ್ರಾಹಿಂ ಎಂಬವರು ಮನೆಯ ಪಕ್ಕದಲ್ಲಿ ರಾಶಿ ಹಾಕಿದ್ದ ತೆಂಗಿನಕಾಯಿ ಸಿಪ್ಪೆ ಮತ್ತು ಕಟ್ಟಿಗೆಗೆ ಆಕಸ್ಮಿಕವಾಗಿ ಬೆಂಕಿ ತಗುಲಿದೆ. ತಕ್ಷಣವೇ ಸ್ಥಳಕ್ಕಾಗಮಿಸಿದ ಅಗ್ನಶಾಮಕದಳ ಸಿಬ್ಬಂದಿಗಳು ಬೆಂಕಿ ನಂದಿಸಿ ಅನಾಹುತವನ್ನು ತಪ್ಪಿಸುವಲ್ಲಿ ಯಶಸ್ವಿಯಾಗಿದ್ದಾರೆ.

error: Content is protected !!
Scroll to Top