ಕಡಬ ಸಮೀಪದ ಪಂಜ ಸೇರಿದಂತೆ ಸುಳ್ಯದ ಹಲವೆಡೆ ಮತ್ತೆ ಭೂಕಂಪನ ➤ ಭಯಭೀತರಾದ ಜನತೆ

(ನ್ಯೂಸ್ ಕಡಬ) newskadaba.com ಸುಳ್ಯ, ಜೂ.28. ದಕ್ಷಿಣ ಕನ್ನಡ ಜಿಲ್ಲೆ ಹಾಗೂ ಕೊಡಗು ಜಿಲ್ಲೆಯ ವಿವಿಧೆಡೆ ಭೂಮಿ ಕಂಪಿಸಿದ ಅನುಭವ ಆಗಿದ್ದು, ಜನತೆ ಭಯಭೀತರಾಗಿದ್ದಾರೆ‌.

ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಪಂಜ, ಕಲ್ಲಾಜೆ, ಗುತ್ತಿಗಾರು, ಐವರ್ನಾಡು, ಎಲಿಮಲೆ, ಮರ್ಕಂಜ, ಉಬರಡ್ಕ, ಅರಂತೋಡು, ಸುಳ್ಯ ಸೇರಿದಂತೆ ವಿವಿಧೆಡೆ ಹಾಗೂ ಕೊಡಗು ಜಿಲ್ಲೆಯ ಭಾಗಮಂಡಲ, ಕರಿಕೆ, ಪೆರಾಜೆ, ನಾಪೋಕ್ಲು ಪರಿಸರದಲ್ಲಿ ಭೂಮಿ ಕಂಪಿಸಿದೆ. ಮೂರು ದಿನಗಳ ಹಿಂದಷ್ಟೇ ಲಘು ಭೂಕಂಪನವಾಗಿದ್ದು, ಇದೀಗ ಮತ್ತೆ ಭೂಮಿ ಅದುರಿದೆ.

Also Read  ನವಜಾತ ಹೆಣ್ಣು ಶಿಶು ಪತ್ತೆ

 

 

error: Content is protected !!
Scroll to Top