ಕರುವಿನ ವಿಚಾರವಾಗಿ ಮಾತಿನ ಚಕಮಕಿ- ಹಲ್ಲೆ ➤ ಮೂವರಿಗೆ ಗಾಯ

(ನ್ಯೂಸ್ ಕಡಬ) newskadaba.com ಪುತ್ತೂರು, ಜೂ. 21. ಕರು ಮಾರಾಟದ ವಿಚಾರದಲ್ಲಿ ಹಲ್ಲೆ ನಡೆದು ಮೂವರು ಆಸ್ಪತ್ರೆಗೆ ದಾಖಲಾಗಿರುವ ಘಟನೆ ಆರ್ಯಾಪು ಗ್ರಾಮದ ಕಲ್ಲರ್ಪೆಯಲ್ಲಿ ನಡೆದಿದೆ.

 

ರಿಝ್ವಾನ್ ಎಂಬವರು ಆರ್ಯಾಪು ಗ್ರಾಮದ ಅಜಿತ್ ಎಂಬವರಿಗೆ ಕರುವೊಂದನ್ನು ನೀಡಿದ್ದು, ಆದರೆ ಮೂರು ತಿಂಗಳ ಕರುವಿನ ಬದಲು ಒಂದು ತಿಂಗಳ ಕರು ನೀಡಿ, ಹೆಚ್ಚಿಗೆ ಹಣವನ್ನು ಪಡೆದು ವಂಚಿಸಲಾಗಿದೆ ಎಂದು ಹೇಳಿ ಕರುವನ್ನು ವಾಪಸ್ ಕೊಂಡುಹೋಗುವಂತೆ ಅಜಿತ್ ಅವರು ರಿಜ್ವಾನ್ ಅವರಿಗೆ ತಿಳಿಸಿದ್ದರು. ಈ ವಿಚಾರವಾಗಿ ಸೋಮವಾರದಂದು ಕಲ್ಲರ್ಪೆಯಲ್ಲಿ ಅಜಿತ್ ಮತ್ತು ರಿಜ್ವಾನ್ ಅವರ ನಡುವೆ ಮಾತಿನ ಚಕಮಕಿ ನಡೆದು ಹಲ್ಲೆ ನಡೆದಿದೆ. ಈ ಸಂದರ್ಭ ಅಜಿತ್ ಅವರ ಜೊತೆಗಿದ್ದ ಆರ್ಯಾಪು ಗ್ರಾ.ಪಂ ಸದಸ್ಯ ಅಶೋಕ್ ಅವರಿಗೂ ಗಾಯವಾಗಿದೆ. ಮೂವರು ಪುತ್ತೂರು ಆಸ್ಪತ್ರೆಯಲ್ಲಿ ದಾಖಲಾಗಿರುವುದಾಗಿ ತಿಳಿದು ಬಂದಿದೆ.

error: Content is protected !!
Scroll to Top