ನಾಳೆ (ಎ.21) ಕಡಬ, ಸುಬ್ರಹ್ಮಣ್ಯ, ನೆಲ್ಯಾಡಿ, ಸವಣೂರು ಭಾಗದಲ್ಲಿ ವಿದ್ಯುತ್ ನಿಲುಗಡೆ

ಪುತ್ತೂರು, ಎ.20. ಕಡಬ – ಸುಬ್ರಹ್ಮಣ್ಯ ಹಾಗೂ 33 ಕೆವಿ ಪುತ್ತೂರು – ಸವಣೂರು – ನೆಲ್ಯಾಡಿ ವಿದ್ಯುತ್ ಮಾರ್ಗದ ಪಾಲನಾ ಕಾರ್ಯ ಹಮ್ಮಿಕೊಂಡಿರುವುದರಿಂದ ನಾಳೆ (ಎ.21) ಬೆಳಿಗ್ಗೆ 10 ರಿಂದ ಸಂಜೆ 5ರ ವರೆಗೆ 33 ಕೆವಿ ಪುತ್ತೂರು – ಕಡಬ – ಸುಬ್ರಹ್ಮಣ್ಯ ಹಾಗೂ 33 ಕೆವಿ ಪುತ್ತೂರು – ಸವಣೂರು – ನೆಲ್ಯಾಡಿ ವಿದ್ಯುತ್ ಮಾರ್ಗಗಳ ವಿದ್ಯುತ್ ನಿಲುಗಡೆ ಮಾಡಲಾಗುವುದು.

ಆದುದರಿಂದ 33/11ಕೆವಿ ಕಡಬ, ನೆಲ್ಯಾಡಿ, ಸವಣೂರು, ಬಿಂದು ವಿದ್ಯುತ್ ಉಪಕೇಂದ್ರದಿಂದ ಹೊರಡುವ ಎಲ್ಲಾ 11 ಕೆವಿ ಫೀಡರ್‌ಗಳಿಂದ ಸರಬರಾಜಾಗುವ ವಿದ್ಯುತ್‌ ಬಳಕೆದಾರರು ಸಹಕರಿಸಬೇಕೆಂದು ಮೆಸ್ಕಾಂ ಪ್ರಕಟಣೆ ತಿಳಿಸಿದೆ.

Also Read  ಜಿಲ್ಲೆಯಲ್ಲಿ ಇಪ್ಪತ್ತು ಮಹಿಳಾ ಸ್ನೇಹಿ (ಪಿಂಕ್) ಮತಗಟ್ಟೆ ಹಾಗೂ ಐದು ವಿಶೇಷ ಮತಗಟ್ಟೆ ರಚನೆ ► ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್

 

 

error: Content is protected !!
Scroll to Top