ಗುರುವಾಯ‌ನ’ಕೆರೆ’ಯಲ್ಲಿ ಮೀನುಗಳ ಅಸಹಜ ಸಾವು ➤ ಏಲಂ ಮೂಲಕ ಕೆರೆಯನ್ನು ಪಡೆದ ವ್ಯಕ್ತಿಗೆ ಪರಿಹಾರ ಧನ ನೀಡಲು ಎಸ್ಡಿಪಿಐ ಆಗ್ರಹ

(ನ್ಯೂಸ್ ಕಡಬ) newskadaba.com ಬೆಳ್ತಂಗಡಿ, ಮಾ. 16. ಕುವೆಟ್ಟು ಗ್ರಾಮ ಪಂಚಾಯತಿ ವ್ಯಾಪ್ತಿಯ ಐತಿಹಾಸಿಕ ಗುರುವಾಯನಕೆರೆಯ ಕೆರೆಯಲ್ಲಿ ಇರುವ ಮೀನುಗಳು ಕಳೆದ ಹಲವು ದಿನಗಳಿಂದ ಅಸಹಜವಾಗಿ ಸಾವಿಗೀಡಾಗುತ್ತಿದ್ದು ಇದರ ಬಗ್ಗೆ ಸಮಗ್ರವಾಗಿ ತನಿಖೆ ನಡೆಸಬೇಕು ಹಾಗೂ ಇದಕ್ಕೆ ಕಾರಣಕರ್ತರಾದವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕೆಂದು ಎಸ್‌ಡಿಪಿಐ ಕುವೆಟ್ಟು ಗ್ರಾಮ ಸಮಿತಿ ಅಧ್ಯಕ್ಷರಾದ ದಾವೂದ್ ಜಿ.ಕೆ ಆಗ್ರಹಿಸಿದ್ದಾರೆ.

ಮೀನಿನ ಅಸಹಜ ಸಾವಿನ ಬಗ್ಗೆ ಸ್ಥಳೀಯವಾಗಿ ಹಲವಾರು ಸಂಶಯಗಳು ಕೇಳಿ ಬರುತ್ತಿದ್ದು, ಇದರ ಬಗ್ಗೆ ಕೂಲಂಕುಷವಾಗಿ ತನಿಖೆ ನಡೆಸಿ ತಪ್ಪಿತಸ್ಥರೆಂದು ಕಂಡು ಬಂದರೆ ಸೂಕ್ತ ಕ್ರಮ ಕೈಗೊಳ್ಳಬೇಕು. ಹಾಗೂ ಈ ಕೆರೆಯನ್ನು ನಿಯಮಾನುಸಾರವಾಗಿ ಏಲಂ ನಲ್ಲಿ ಪಡೆದ ವ್ಯಕ್ತಿಗೆ ಮೀನಿನ ಅಸಹಜ ಸಾವಿನಿಂದಾಗಿ ಆರ್ಥಿಕ ನಷ್ಟ ಸಂಭವಿಸಿರುವುದರಿಂದ ಸರ್ಕಾರ ಇವರಿಗೆ ಸೂಕ್ತ ಪರಿಹಾರ ಒದಗಿಸಬೇಂದು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಕುವೆಟ್ಟು ಗ್ರಾಮ ಸಮಿತಿ ಅಧ್ಯಕ್ಷರಾದ ದಾವೂದ್ ಜಿ.ಕೆ ಪತ್ರಿಕಾ ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.

Also Read  ರಸ್ತೆಬಿಟ್ಟ ಚರಂಡಿಗೆ ಇಳಿದ ಲಾರಿ ➤ ಪ್ರಾಣಾಪಾಯದಿಂದ ಚಾಲಕ, ನಿರ್ವಾಹಕ ಪಾರು

error: Content is protected !!
Scroll to Top