ಮಂಗಳೂರು: ಮುಳುಗಿದ ಹಡಗಿನ ಅವಶೇಷಗಳನ್ನು ಹೊರತರುತ್ತಿದ್ದ ವೇಳೆ ಕಾರ್ಮಿಕ ಮೃತ್ಯು..!!

(ನ್ಯೂಸ್ ಕಡಬ) newskadaba.com ಮಂಗಳೂರು, ಮಾ. 11. ಮುಳುಗಿದ ಹಡಗಿನ ಅವಶೇಷಗಳನ್ನು ದಡಕ್ಕೆ ತರುವ ಕೆಲಸದಲ್ಲಿ ತೊಡಗಿದ್ದ ವೇಳೆ ಕಾರ್ಮಿಕರೋರ್ವ ಮೃತಪಟ್ಟ ಘಟನೆ ವರದಿಯಾಗಿದೆ.


ಮೃತರನ್ನು ಪಶ್ಚಿಮ ಬಂಗಾಳ ಮೂಲದ ನಾಸಿರುದ್ದೀನ್ ಖಾನ್ (32) ಎಂದು ಗುರುತಿಸಲಾಗಿದೆ. ಈತ ತಣ್ಣೀರುಬಾವಿ ಬಳಿ ಮುಳುಗಿದ್ದ ಹಡಗಿನ ಅವಶೇಷಗಳನ್ನು ಸಮುದ್ರದ ಆಳದಿಂದ ಹೊರತರುತ್ತಿದ್ದ ವೇಳೆ ಹಡಗಿನ ಕಬ್ಬಿಣದ ಹ್ಯಾಂಡಲ್ ನಾಸಿರುದ್ದೀನ್ ಖಾನ್ ಅವರ ತಲೆಗೆ ಬಲವಾಗಿ ಬಡಿದ ಪರಿಣಾಮ ಅವರು ಗಂಭೀರ ಗಾಯಗೊಂಡು ಕೊನೆಯುಸಿರೆಳೆದಿದ್ದಾರೆ ಎನ್ನಲಾಗಿದೆ.

error: Content is protected !!
Scroll to Top