ತಂದೆ ತಿಥಿಯ ದಿನವೇ ಸಿಲಿಂಡರ್ ಸ್ಫೋಟಗೊಂಡು ಮಗಳು ಮೃತ್ಯು..!



(ನ್ಯೂಸ್ ಕಡಬ) newskadaba.com ಬೆಂಗಳೂರು, ಫೆ. 17. ತಂದೆಯ ತಿಥಿಯ ದಿನವೇ ಗ್ಯಾಸ್ ಸ್ಪೋಟಗೊಂಡು ಮಗಳ ಮೃತಪಟ್ಟ ಘಟನೆ ಕೆ.ಎಸ್ ಲೇಔಟ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.







ಮೃತ ಮಗಳನ್ನು ಪರಮೇಶ್ವರಿ ಎಂದು ಗುರುತಿಸಲಾಗಿದೆ. ಇವರು ತಂದೆ ಕಾಶಿನಾಥ್ ಅವರ ಆರನೇ ಪುಣ್ಯತಿಥಿಯ ದಿನದಂದೇ ಸಿಲಿಂಡರ್ ಸ್ಪೋಟಗೊಂಡು ಮೃತಪಟ್ಟಿದ್ದರೆ ಸಂಬಂದಿಕರಾದ ಸೌಭಾಗ್ಯ, ಶರವಣ, ಪರಮಶಿವಂ, ಭುವನೇಶ್ವರಿ ಹಾಗೂ ಮಾಲಾ ಎಂಬವರು ಗಂಭೀರ ಗಾಯಗೊಂಡಿದ್ದಾರೆ. ಈ ಕುರಿತು ಕುಮಾರಸ್ವಾಮಿ ಲೇಔಟ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.






error: Content is protected !!
Scroll to Top