ಗಾಂಜಾ ಸಾಗಾಟ ಪ್ರಕರಣ ➤ ಮೂವರ ಬಂಧನ..!

(ನ್ಯೂಸ್ ಕಡಬ)newskadaba.com ಮಂಗಳೂರು, ಫೆ. 17. ಗಾಂಜಾ ಸಾಗಾಟ ಮಾಡುತ್ತಿದ್ದ ಮೂವರು ಆರೋಪಿಗಳನ್ನು ಕೊಣಾಜೆ ಪೊಲೀಸರು ಮಂಜನಾಡಿ ಉರುಮನೆ ಕ್ರಾಸ್ ಎಂಬಲ್ಲಿ ಬಂಧಿಸಿದ್ದಾರೆ.

ಬಂಧಿತ ಆರೋಪಿಗಳನ್ನು ವರ್ಕಾಡಿ ಗ್ರಾಮದ ಮಹಮ್ಮದ್ ಹನೀಫ್, ತಲಪಾಡಿ ಸಮೀಪದ ಕೆಸಿ ರೋಡ್ ನ ಹಬೀಬ್ ಹಾಗೂ ಮಂಜೇಶ್ವರ ಗ್ರಾಮದ ಮಾಮದ್ ನಸೀಬ್ ಎಂದು ಗುರುತಿಸಲಾಗಿದೆ. ಆರೋಪಿಗಳು ದ್ವಿಚಕ್ರ ವಾಹನದಲ್ಲಿ ಗಾಂಜಾ ಸಾಗಾಟ ಮಾಡುತ್ತಿರುವ ಬಗ್ಗೆ ಮಾಹಿತಿ ಪಡೆದ ಪೊಲೀಸರು ದಾಳಿ ನಡೆಸಿ 13,400ರೂ. ಮೌಲ್ಯದ 1.340 ಗ್ರಾಂ ಗಾಂಜಾ ಹಾಗೂ ದ್ವಿಚಕ್ರವಾಹನ ಸಹಿತ ಆರೋಪಿಗಳನ್ನು ಬಂಧಿಸಿದ್ದಾರೆ.

Also Read  ತಾಯಿಯ ಮರಣ ಪ್ರಮಾಣ ಪತ್ರ ಕೇಳಿದ ಮಗಳಿಗೆ ಬಿಗ್ ಶಾಕ್..!!   ➤ಅಧಿಕಾರಿಯ ಮೇಲೆ ನೆಟ್ಟಿಗರ ಆಕ್ರೋಶ

error: Content is protected !!
Scroll to Top