ನದಿಗೆ ಹಾರಿ ಆತ್ಮಹತ್ಯೆಗೈದ ಯುವಕನ ಮೃತದೇಹ ಮೇಲೆತ್ತಿದ ಆಸಿಫ್ ಆಪತ್ಬಾಂಧವ..! ➤ ಪ್ರತಿಭಟನೆಯ ನಡುವೆಯೂ ಮೆರೆದ ಮಾನವೀಯತೆಗೆ ವ್ಯಾಪಕ ಪ್ರಶಂಸೆ

(ನ್ಯೂಸ್ ಕಡಬ) newskadaba.com ಹಳೆಯಂಗಡಿ, ಫೆ. 17. ಸುರತ್ಕಲ್ ಎನ್ಐಟಿಕೆ ಟೋಲ್ ಗೇಟ್ ರದ್ದುಗೊಳಿಸಬೇಕೆಂದು ಕಳೆದ ಹತ್ತು ದಿನಗಳಿಂದ ಆಹೀರಾತ್ರಿ ಪ್ರತಿಭಟನೆ ನಡೆಸುತ್ತಿರುವ ಆಸಿಫ್ ಆಪತ್ಬಾಂಧವ ಪ್ರತಿಭಟನೆಯ ನಡುವೆಯೂ ಮಾನವೀಯತೆ ಮೆರೆದಿದ್ದಾರೆ.

ಬುಧವಾರದಂದು ಪಾವಂಜೆ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಇಂಜಿನಿಯರ್ ಸುಚೇಂದ್ರ ಕುಮಾರ್ ಅವರ ಮೃತದೇಹವನ್ನು ಪ್ರತಿಭಟನೆಯಲ್ಲಿದ್ದ ಆಸಿಫ್ ಆಪತ್ಬಾಂಧವ ಘಟನಾ ಸ್ಥಳಕ್ಕಾಗಮಿಸಿ ನದಿಗೆ ಹಾರಿ ದೋಣಿಯ ಸಹಾಯದಿಂದ ಮೇಲಕ್ಕೆತ್ತಿ, ಬಳಿಕ ಪ್ರತಿಭಟನೆಯನ್ನು ಮುಂದುವರಿಸಿದ್ದಾರೆ.

Also Read  ವಿಟ್ಲ-ಅಂಗನವಾಡಿ ಸಹಾಯಕಿ ಹುದ್ದೆಗೆ-ಅರ್ಜಿ ಆಹ್ವಾನ

error: Content is protected !!
Scroll to Top