ಬಾವಿಗೆ ಬಿದ್ದು ಬಾಲಕಿ ಮೃತ್ಯು ➤ ತಾಯಿಯ ವಿರುದ್ದ ತಂದೆಯಿಂದಲೇ ಕೊಲೆ ಆರೋಪ…!

(ನ್ಯೂಸ್ ಕಡಬ) newskadaba.com ಚಿಕ್ಕಬಳ್ಳಾಪುರ, ಫೆ. 16. ಬಾವಿಗೆ ಬಿದ್ದು ಬಾಲಕಿಯೋರ್ವಳು ಮೃತಪಟ್ಟ ಘಟನೆ ಜಿಲ್ಲೆಯ ಚಿಂತಾಮಣಿ ತಾಲೂಕಿನ ಶಾಮರಾವ್ ಹೊಸಪೇಟೆ ಗ್ರಾಮದಲ್ಲಿ ನಡೆದಿದೆ.

 

ಮೃತ ಬಾಲಕಿಯನ್ನು ರುಷ್ಮಿತಾ(10) ಎಂದು ಗುರುತಿಸಲಾಗಿದೆ. ಮಂಗಳವಾರದಂದು ಸಂಜೆ ಶಾಲೆಯಿಂದ ಬಂದ ರುಷ್ಮಿತಾ ಮನೆಯ ಪಕ್ಕದಲ್ಲಿರುವ ಜಮೀನಿಗೆ ತೆರಳಿದ್ದ ವೇಳೆ ಬಾವಿಗೆ ಬಿದ್ದಿದ್ದಾಳೆ. ಇತ್ತ ರುಷ್ಮಿತಾ ಕಾಣಿಸುತ್ತಿಲ್ಲ ಎಂದು ಹುಡುಕಾಡಿದ ಸಂದರ್ಭ ಬಾವಿಯ ಬಳಿ ಬಾಲಕಿಯ ಚಪ್ಪಲಿ ಪತ್ತೆಯಾಗಿದ್ದು, ಬಾವಿಯಲ್ಲಿ ನೋಡಿದಾಗ ರುಷ್ಮಿತಾಳ ಮೃತದೇಹ ಪತ್ತೆಯಾಗಿದೆ. ಈ ಕುರಿತು ಮಗುವಿನ ತಾಯಿ ನೀಡದ ದೂರಿನ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಈ ಮಧ್ಯೆ ರುಷ್ಮಿತಾಳ ತಂದೆ ಮಂಜುನಾಥ್ ಇದು ಆಕಸ್ಮಿಕ ಸಾವಲ್ಲ, ಉದ್ದೇಶಪೂರ್ವಕವಾಗಿ ತಾಯಿಯೇ ಕೊಲೆ ಮಾಡಿದ್ದಾಳೆ ಎಂದು ಆರೋಪಿಸಿ ದೂರು ನೀಡಲು ಮುಂದಾಗಿದ್ದಾರೆ.

Also Read  ಉಳ್ಳಾಲ: ಚಾಲಕನ ನಿಯಂತ್ರಣ ತಪ್ಪಿ ಬಸ್ ನಿಲ್ದಾಣಕ್ಕೆ ನುಗ್ಗಿದ ಕಾರು ➤ ಅದೃಷ್ಟವಶಾತ್ ಪ್ರಯಾಣಿಕರು ಪಾರು

 

 

 

error: Content is protected !!
Scroll to Top