ಮಗುವನ್ನು ಸೊಂಟಕ್ಕೆ ಕಟ್ಟಿಕೊಂಡು ಬಾವಿಗೆ ಹಾರಿದ ಸ್ಥಿತಿಯಲ್ಲಿ ತಾಯಿ- ಮಗುವಿನ ಮೃತದೇಹ ಪತ್ತೆ ➤ ಕೊಲೆ ಶಂಕೆ..!?

(ನ್ಯೂಸ್ ಕಡಬ) newskadaba.com ರಿಪ್ಪನ್ ಪೇಟೆ, ಫೆ. 04. ಮಗುವನ್ನು ತನ್ನ ಸೊಂಟಕ್ಕೆ ಕಟ್ಟಿಕೊಂಡು ತಾಯಿಯೋರ್ವಳು ಮನೆ ಮುಂಭಾಗದಲ್ಲಿರುವ ಬಾವಿಗೆ ಹಾರಿರುವ ಘಟನೆ ಬಿದರಹಳ್ಳಿ ಗ್ರಾಮದ ಮಜರೆ ಚಿಟ್ಟೆ ಗದ್ದೆಯಲ್ಲಿ ನಡೆದಿದೆ.

ಮೃತರನ್ನು ವಿದ್ಯಾ (32) ಮಗು ತನ್ವಿ (4)ಎಂದು ಗುರುತಿಸಲಾಗಿದೆ. ವಿದ್ಯಾ ತನ್ನ ಮಗು ತನ್ವಿಯನ್ನು ವೇಲ್‌ನಿಂದ ಸೊಂಟಕ್ಕೆ ಕಟ್ಟಿಕೊಂಡು ಮನೆ ಮುಂಭಾಗದ ಬಾವಿಗೆ ಹಾರಿದ್ದಾರೆ ಎನ್ನಲಾಗಿದೆ. ಮೂಲತಃ ಶಿಕಾರಿಪುರ ತಾಲ್ಲೂಕಿನ ಸಿದ್ದಾಪುರದ ನಿವಾಸಿಯಾದ ವಿದ್ಯಾಳನ್ನು 2014ರಲ್ಲಿ ಲೋಹಿತ್ ಎಂಬವನಿಗೆ ವಿವಾಹ ಮಾಡಿ ಕೊಡಲಾಗಿತ್ತು. ವಿವಾಹದ ಬಳಿಕ ಬಂಗಾರ ತರುವಂತೆ ಆಕೆಯ ಪತಿಯ ಕುಟುಂಬಸ್ಥರು ಪೀಡಿಸುತ್ತಿದ್ದರು ಎನ್ನಲಾಗಿದೆ. ಘಟನೆಯ ಕುರಿತು ಆಕೆಯ ಗಂಡ, ಅತ್ತೆ, ಮಾವನೇ ಮಗಳನ್ನು ಹೊಡೆದು ಕೊಲೆ ಮಾಡಿ ಬಾವಿಗೆ ಎಸೆದಿದ್ದಾರೆ ಎಂದು ವಿದ್ಯಾ ಕುಟುಂಬಸ್ಥರು ಆರೋಪಿಸಿದ್ದಾರೆ.

Also Read  ಬಸ್ ಹರಿದು ವಿದ್ಯಾರ್ಥಿ ಮೃತ್ಯು..!!!

error: Content is protected !!
Scroll to Top