ಮಂಗಳೂರು: ಅಕ್ರಮ ಗೋಮಾಂಸ ಸಾಗಾಟ ➤ ನಾಲ್ವರ ಬಂಧನ

(ನ್ಯೂಸ್ ಕಡಬ) newskadaba.com ಮಂಗಳೂರು, ಫೆ. 03. ಕೇರಳದಿಂದ ಅಕ್ರಮವಾಗಿ ಗೋಮಾಂಸ ಸಾಗಾಟ ಮಾಡುತ್ತಿದ್ದ ನಾಲ್ವರನ್ನು ಪೊಲೀಸರು ಬಂಧಿಸಿದ ಘಟನೆ ಗುರುವಾರದಂದು ವರದಿಯಾಗಿದೆ.


ಬಂಧಿತ ಆರೋಪಿಗಳನ್ನು ಚೆಂಬುಗುಡ್ಡೆಯ ನಿವಾಸಿ ಹುಸೇನ್, ಕೋಡಿ ಉಳ್ಳಾಲ ನಿವಾಸಿಗಳಾದ ಮೊಹಮ್ಮದ್ ಅಮೀನ್, ಸುಹೈಬ್ ಅಖ್ತರ್ ಮತ್ತು ಮುಹಮ್ಮದ್ ಮುಜಾಂಬಿಲ್ ಎಂದು ಗುರುತಿಸಲಾಗಿದೆ. ಆರೋಪಿಗಳು ಕಾಸರಗೋಡಿನಿಂದ ಉಳ್ಳಾಲಕ್ಕೆ ಕಾರಿನ ಮೂಲಕ ಗೋಮಾಂಸ ತಂದು ಮಾರಾಟ ಮಾಡುತ್ತಿದ್ದರು ಎಂದೆನ್ನಲಾಗಿದೆ. ಬಂಧಿತ ಆರೋಪಿಗಳಿಂದ ಸುಮಾರು 3,10,000 ರೂಪಾಯಿ ಮೌಲ್ಯದ ಕಾರು, 160 ಕೆಜಿ ಗೋಮಾಂಸ, 3 ಹಸುವಿನ ತಲೆ ಮತ್ತು ಪ್ರಾಣಿಗಳ ಚರ್ಮವನ್ನು ವಶಪಡಿಸಿಕೊಳ್ಳಲಾಗಿದೆ.

Also Read  ಸೋಲಾರ್ ಶಕ್ತಿಯಿಂದ ಮನೆಬಳಕೆಯ ನೀರಿನ ಪಂಪ್ ಚಾಲನೆ ➤ ನೂಜಿಬಾಳ್ತಿಲದ ಯುವಕನ ಸಾಧನೆ 

error: Content is protected !!
Scroll to Top