ಕೇಂದ್ರ ಬಜೆಟ್‍ನಲ್ಲಿ ಆಧುನಿಕ ತಂತ್ರಜ್ಞಾನ ಮತ್ತು ಡಿಜಿಟಲೀಕರಣಕ್ಕೆ ಒತ್ತು ➤ ಮಟ್ಟಾರ್ ರತ್ನಾಕರ್ ಹೆಗ್ಡೆ

(ನ್ಯೂಸ್ ಕಡಬ) newskadaba.com ಮಂಗಳೂರು, ಫೆ. 03. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿರುವ 2022-23 ನೇ ಸಾಲಿನ 39.54 ಲಕ್ಷ ಕೋಟಿಯ ನೂತನ ಬಜೆಟ್ ನಮ್ಮ ದೇಶವನ್ನು ಆಧುನಿಕ ತಂತ್ರಜ್ಞಾನ ಮತ್ತು ಡಿಜಿಟಲೀಕರಣದ ಕಡೆಗೆ ಕೊಂಡೊಯ್ಯುತ್ತಿದೆ ಎಂದು ಕರಾವಳಿ ಅಭಿವೃದ್ದಿ ಪ್ರಾಧಿಕಾರದ ಅದ್ಯಕ್ಷರಾದ ಮಟ್ಟಾರ್ ರತ್ನಾಕರ ಹೆಗ್ಡೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿಯವರು ವಿತ್ತ ಸಚಿವರ ಮೂಲಕ ತೆಗೆದುಕೊಂಡ ದಿಟ್ಟ ನಿರ್ಧಾರವಾಗಿದೆ. ಇದರ ಜೊತೆಗೆ ಒಂದು ದೇಶ-ಒಂದು ನೋಂದಣಿ, ಡಿಜಿಟಲ್ ಕರೆನ್ಸಿ, ರೈತರ ರಕ್ಷಣೆ, ಶಿಕ್ಷಣ, ಗ್ರಾಮೀಣ ಅಭಿವೃದ್ದಿ ಹಾಗೂ ನಿರುದ್ಯೋಗ ನಿರ್ಮೂಲನೆಗೆ ಒತ್ತು ನೀಡುವ ಮೂಲಕ ಹೊಸ ಆರ್ಥಿಕತೆಯತ್ತ ಇದೊಂದು ದಿಟ್ಟ ಹೆಜ್ಜೆ ಎಂದು ಅವರು ಶ್ಲಾಘಿಸಿದರು.

Also Read  ಇಚಿಲಂಪಾಡಿ ಮನೆ ದರೋಡೆ ಮಾಡಿದ ಅಂತರರಾಜ್ಯ ದರೋಡೆಕೋರರ ಬಂಧನ ► ದರೋಡೆಯ ನಂತರ ತನಿಖೆಯ ಹಾದಿ ತಪ್ಪಿಸಲು ಇವರು ಮಾಡುತ್ತಿದ್ದ ಪ್ಲ್ಯಾನ್ ಏನು ಗೊತ್ತೇ..?

error: Content is protected !!
Scroll to Top