ಮಂಗಳೂರು: ತಲವಾರು ಹಿಡಿದು ಆತಂಕ ಸೃಷ್ಟಿಸಿದ್ದ ಓರ್ವ ಅರೆಸ್ಟ್…!

(ನ್ಯೂಸ್ ಕಡಬ) newskadaba.com ಮಂಗಳೂರು, ಫೆ. 03. ನಗರದ ಬಳ್ಳಾಲ್ ಬಾಗ್ ನ ಕಾಲೇಜೊಂದರ ಬಳಿ ತಲವಾರು ಹಿಡಿದು ಆತಂಕ ಸೃಷ್ಟಿಸಿದ್ದ ಯುವಕರ ತಂಡದ ಪೈಕಿ ಓರ್ವನನ್ನು ಬರ್ಕೆ ಪೊಲೀಸರು ಬಂಧಿಸಿದ್ದಾರೆ.


ಬಂಧಿತ ಆರೋಪಿಯನ್ನು ವಿವೇಕನಗರ ನಿವಾಸಿ ವಿಶ್ವನಾಥ್ ಎಂದು ಗುರುತಿಸಲಾಗಿದೆ. ಬುಧವಾರದಂದು ಕಾಲೇಜು ವಿದ್ಯಾರ್ಥಿಗಳು ಹಾಗೂ ಯುವಕರ ತಂಡದ ನಡುವೆ ಮಾತಿನ ಚಕಮಕಿ ನಡೆದಿದ್ದು, ಸ್ವಲ್ಪ ಹೊತ್ತಿನ ನಂತರ ಯುವಕರಿಬ್ಬರು ಸ್ಕೂಟರ್ ನಲ್ಲಿ ತಲವಾರು ಹಿಡಿದು ಕಾಲೇಜು ಆವರಣದ ಬಳಿ ಬಂದಿದ್ದನ್ನು ವಿದ್ಯಾರ್ಥಿಗಳು ವಿಡಿಯೋ ಸರೆಹಿಡಿದಿದ್ದರು. ಅಲ್ಲದೇ ಈ ಕುರಿತು ಬರ್ಕೆ ಠಾಣೆಯಲ್ಲಿ ದೂರು ದಾಖಲಿಸಿದ್ದು, ವಿಡಿಯೋ ದ ಆಧಾರದಲ್ಲಿ ಪೊಲೀಸರು ಓರ್ವನನ್ನು ಬಂಧಿಸಿದ್ದಾರೆ.

Also Read  ಪೇಜಾವರ ಶ್ರೀ ನಿಧನ: ಅಜ್ಜರಕಾಡು ಮೈದಾನದಲ್ಲಿ ಸಾರ್ವಜನಿಕ ದರ್ಶನಕ್ಕೆ ಅವಕಾಶ

 

error: Content is protected !!
Scroll to Top