9 ಮಂದಿ ಐಪಿಎಸ್ ಗಳ ವರ್ಗಾವಣೆಗೊಳಿಸಿ ಆದೇಶ ಹೊರಡಿಸಿದ ಸರಕಾರ ➤ ಸಿಐಡಿ ಎಸ್ಪಿಯಾಗಿದ್ದ ರವಿ ಡಿ.ಚನ್ನಣ್ಣನವರ್ ವಾಲ್ಮೀಕಿ ಅಭಿವೃದ್ಧಿ ನಿಗಮದ ಎಂ.ಡಿ…!

(ನ್ಯೂಸ್ ಕಡಬ) newskadaba.com ಬೆಂಗಳೂರು, ಜ. 28. ಐಪಿಎಸ್ ರವಿ ಡಿ. ಚನ್ನಣ್ಣನವರ್ ಸೇರಿದಂತೆ ಒಂಬತ್ತು ಮಂದಿ ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆಗೊಳಿಸಿ ರಾಜ್ಯ ಸರಕಾರ ಆದೇಶ ಹೊರಡಿಸಿದೆ.

ಸಿಐಡಿ ಎಸ್ಪಿಯಾಗಿ ಕಾರ್ಯ ನಿರ್ವಹಿಸುತ್ತಿದ್ದ ರವಿ ಡಿ ಚೆನ್ನಣ್ಣನವರ್ ಅವರನ್ನು ವಾಲ್ಮೀಕಿ ಅಭಿವೃದ್ಧಿ ನಿಗಮದ ಎಂಡಿಯಾಗಿ ವರ್ಗಾವಣೆ ಮಾಡಲಾಗಿದೆ. ಉಳಿದ ಐಪಿಎಸ್ ಅಧಿಕಾರಿಗಳಾದ ಭಿಮಶಂಕರ್ ಗುಳೇದ್ ಅವರನ್ನು ಬೆಂಗಳೂರು ಪೂರ್ವ ವಿಭಾಗದ ಡಿಸಿಪಿಯಾಗಿ, ಅಬ್ದುಲ್ ಅಹ್ಮದ್ ಅವರನ್ನು ಎಸಿಬಿಯಿಂದ ಕೆಎಸ್ಸಾರ್ಟಿಸಿ ವಿಚಕ್ಷಣ ದಳಕ್ಕೆ, ಟಿ.ಪಿ ಶಿವಕುಮಾರ್ ಅವರನ್ನು ಕಾರಾಗೃಹ ಇಲಾಖೆ ಎಸ್ಪಿಯಿಂದ ಚಾಮರಾಜನಗರ ಎಸ್ಪಿಯಾಗಿ, ಡೆಕ್ಕ ಕಿಶೋರ್ ಬಾಬು ಅವರನ್ನು ಬೀದರ್ ಎಸ್ಪಿಯಾಗಿ ಹಾಗೂ ಅರುಣಂಗ್ಯುಗಿರಿ ಅವರನ್ನು ಕೊಪ್ಪಳ ಎಸ್ಪಿಯಾಗಿ ವರ್ಗಾವಣೆ ಮಾಡಲಾಗಿದೆ.

 

error: Content is protected !!

Join the Group

Join WhatsApp Group