ಮಂಗಳೂರಿಗೆ ತೆರಳಿದ್ದ ಎಣ್ಮೂರಿನ ದಂಪತಿ ➤ ಪತ್ನಿ ಮಿಸ್ಸಿಂಗ್- ಪತಿಯಿಂದ ದೂರು

(ನ್ಯೂಸ್ ಕಡಬ) newskadaba.com ಮಂಗಳೂರು, ಜ. 21.  ವಿವಾಹಿತ ಮಹಿಳೆಯೋರ್ವರು ಉರ್ವ ಸ್ಟೋರ್ ಬ್ಯಾಂಕ್ ಗೆಂದು ತೆರಳಿ ನಾಪತ್ತೆಯಾದ ಘಟನೆ ವರದಿಯಾಗಿದೆ.

ನಾಪತ್ತೆಯಾದ ಮಹಿಳೆಯನ್ನುಕಲ್ಮಡ್ಕ ನಿವಾಸಿ ದಿವ್ಯ(29) ಎಂದು ಗುರುತಿಸಲಾಗಿದೆ. ಸುಳ್ಯ ತಾಲೂಕಿನ ಕಲ್ಮಡ್ಕದ ಮನೆಯಿಂದ ದಂಪತಿಗಳಿಬ್ಬರು ಶುಕ್ರವಾರದಂದು ಮಂಗಳೂರಿಗೆ ತೆರಳಿದ್ದರು. ಅಲ್ಲಿಂದ ಬಳಿಕ ಉರ್ವ ಸ್ಟೋರ್ ಬ್ಯಾಂಕ್ ಗೆ ಹೋಗಿಬರುವುದಾಗಿ ತೆರಳಿರುವ ಅವರು ಮೊಬೈಲ್ ಸ್ವಿಚ್ ಆಫ್ ಮಾಡಿ ನಾಪತ್ತೆಯಾಗಿದ್ದಾರೆ ಎಂದು ತಿಳಿದುಬಂದಿದೆ. ಈಕೆಯನ್ನು ಎಲ್ಲಾದರೂ ಕಂಡಲ್ಲಿ ಮಾಹಿತಿ ನೀಡುವಂತೆ ಮಹಿಳೆಯ ಪತಿ ಸಾಮಾಜಿಕ ಜಾಲತಾಣದಲ್ಲಿ ವಿನಂತಿಸಿದ್ದಾರೆ.

error: Content is protected !!
Scroll to Top