ಕುಂತೂರು: ಸಬ್ ಇನ್ಸ್‌ಪೆಕ್ಟರ್ ಹುದ್ದೆಗೆ ಆಯ್ಕೆಯಾದ ಬದ್ರುನ್ನಿಶಾರಿಗೆ ನಾಗರಿಕರಿಂದ ಸನ್ಮಾನ

(ನ್ಯೂಸ್ ಕಡಬ) newskadaba.com ಕಡಬ, ಜ. 21. ರಾಜ್ಯ ಪೊಲೀಸ್ ಇಲಾಖೆಯ ಸಬ್ ಇನ್ಸ್‌ಪೆಕ್ಟರ್ ಹುದ್ದೆಗೆ ಪರೀಕ್ಷೆ ಬರೆದು 39ನೇ ರ್ಯಾಂಕ್ ನಲ್ಲಿ ತೇರ್ಗಡೆ ಹೊಂದಿದ ತಾಲೂಕಿನ ಕುಂತೂರು ನಿವಾಸಿ ಬದ್ರುನ್ನಿಶಾ ಅವರನ್ನು ಕುಂತೂರು ನಾಗರಿಕರು ಹೂಗುಚ್ಛ ನೀಡಿ ಸನ್ಮಾನಿಸಿದರು.


ಈ ಸಂದರ್ಭದಲ್ಲಿ ದ.ಕ ಮುಸ್ಲಿಂ ಅಸೋಸಿಯೇಷನ್ ಅಲ್ಬಾಹ ಘಟಕ ಇದರ ಜೊತೆ ಕಾರ್ಯದರ್ಶಿ ಉಮರ್ ಹಾಜಿ ಕುಂತೂರು, ಪುತ್ತೂರು ಕೆಎಸ್ಸಾರ್ಟಿಸಿ ಸಂಚಾರಿ ನಿಯಂತ್ರಕರಾದ ಅಬ್ಬಾಸ್ ಕೋಚಕಟ್ಟೆ, ಅಯ್ಯೂಬ್ ಯು.ಕೆ, ಕುಂತೂರು ಜುಮಾ ಮಸೀದಿ ಕಾರ್ಯದರ್ಶಿ ಯಾಕುಬ್ ಕೋಚಕಟ್ಟೆ, ಪುತ್ತುಮೋನು ಮುಡಿಪಿನಡ್ಕ, ನೌಶಾದ್ ಕೋಚಕಟ್ಟೆ ಉಪಸ್ಥಿತರಿದ್ದರು. ಈಕೆ ಕುಂತೂರು ಕೋಚಕಟ್ಟೆ ನಿವಾಸಿ ಎ.ಕೆ ಇಸ್ಮಾಯಿಲ್ ಹಾಗೂ ಝುಬೈದಾ ಹೇಂತಾರು ದಂಪತಿಯ ಪುತ್ರಿ.

 

Also Read  Big Breaking News ➤ ಹಿಜಾಬ್ ನಿಷೇಧ ವಿರೋಧಿಸಿ ನಾಳೆ ಕರ್ನಾಟಕ ಬಂದ್...!!

error: Content is protected !!
Scroll to Top