ಮಂಗಳೂರು: ಚಿಪ್ಪು ಮೀನು ಪದಾರ್ಥ ಸೇವಿಸಿ ಹಲವರು ಅಸ್ವಸ್ಥ..!

(ನ್ಯೂಸ್ ಕಡಬ) newskadaba.com ಮಂಗಳೂರು, ಜ. 19. ಮರುವಾಯಿ ಮೀನು ಸೇವಿಸಿದ ಪರಿಣಾಮ ಹಲವರು ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ಬಜ್ಪೆಯ ಕುಪ್ಪೆಪದವು ಎಂಬಲ್ಲಿ ನಡೆದಿದೆ.


ತುಳುವಿನಲ್ಲಿ ಮರುವಾಯಿ ಎಂದು ಕರೆಯಲ್ಪಡುವ ಚಿಪ್ಪು ಮೀನನ್ನು ಖರೀದಿಸಿ ಪದಾರ್ಥ ಮಾಡಿ ತಿಂದ ಮೇಲೆ ಹಲವು ಮಂದಿ ಅಸ್ವಸ್ಥಗೊಂಡಿದ್ದಾರೆ ಎನ್ನಲಾಗಿದೆ. ಮರುವಾಯಿ ತಿಂದ ಜನರಲ್ಲಿ ತಲೆ ಸುತ್ತಲಾರಂಭಿಸಿದ್ದು, ಕಣ್ಣು ಮಂಜಾಗಿ, ವಾಂತಿಯೂ ಆಗಿದೆ ಎಂಬ ಸುದ್ದಿಯೂ ಕೇಳಿಬಂದಿದೆ.

Also Read  ಕುಮಾರಧಾರೆಯಲ್ಲಿ ನೀರಿನ ಮಟ್ಟ ಹೆಚ್ಚಳ ➤ ಸ್ನಾನಘಟ್ಟ ಜಲಾವೃತ

 

 

 

 

error: Content is protected !!