ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ಪೊಲೀಸ್ ಅಧಿಕಾರಿಗಳ ವರ್ಗಾವಣೆ

(ನ್ಯೂಸ್ ಕಡಬ) newskadaba.com ಮಂಗಳೂರು, ಜ. 17. ರಾಜ್ಯದಲ್ಲಿ ಡಿವೈಎಸ್ಪಿ ಹಾಗೂ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಗಳನ್ನು ವಿವಿಧ ಕಡೆಗೆ ವರ್ಗಾವಣೆ ಮಾಡಲಾಗಿದ್ದು, ಇದರ ಬೆನ್ನಲ್ಲೇ ಮಂಗಳೂರಿನಲ್ಲಿಯೂ ವಿವಿಧ ಇನ್ಸ್ಪೆಕ್ಟರ್ ಗಳ ವರ್ಗಾವಣೆ ಮಾಡಲಾಗಿದೆ.

ಉಡುಪಿ ಸಿಎಸ್ಪಿ ಆಗಿದ್ದ ಅನಂತಪದ್ಮನಾಭ ಮಂಗಳೂರಿನ ಕದ್ರಿ ಠಾಣೆಗೆ ವರ್ಗಾವಣೆ, ಕದ್ರಿ ಠಾಣಾ ಇನ್ಸ್ಪೆಕ್ಟರ್ ಸವಿತ್ರ ತೇಜ ಅವರನ್ನು ನಗರದ ಎಕನಾಮಿಕ್ ಅಂಡ್ ಸೈಬರ್ ಪೊಲೀಸ್ ಠಾಣೆ(ಸೆನ್‌)ಗೆ ವರ್ಗಾವಣೆ ಮಾಡಲಾಗಿದೆ. ಮೂಡಬಿದ್ರೆ ಠಾಣಾ ಇನ್ಸ್ಪೆಕ್ಟರ್ ದಿನೇಶ್ ಕುಮಾರ್ ಅವರನ್ನು ಸಿ ಎಸ್ ಬಿ ಗೆ ವರ್ಗಾವಣೆ ಮಾಡಲಾಗಿದೆ. ಮಧುಸೂದನ್ ರಾವ್ ಅವರನ್ನು ಕೊಣಾಜೆ ಠಾಣೆಯಿಂದ ದಕ್ಷಿಣ ಕನ್ನಡ ಮಹಿಳಾ ಠಾಣೆಗೆ ವರ್ಗಾಯಿಸಲಾಗಿದೆ. ಸುರೇಶ್ ಜಿ ನಾಯಕ್ ದಕ್ಷಿಣ ಕನ್ನಡ ಸೇನೆಯಿಂದ ಸಿಎಸ್ಪಿ ಗೆ ವರ್ಗಾವಣೆ ಮಾಡಲಾಗಿದೆ.

Also Read  ಮಾನವ ಸಂಪನ್ಮೂಲ ಒದಗಿಸಲು ಟೆಂಡರ್ ಆಹ್ವಾನ

 

 

error: Content is protected !!
Scroll to Top