ಪುತ್ತೂರು: ವೈದ್ಯರ ಕೋಣೆಯೊಳಗೆ ಚಿಲಕ ಹಾಕಿ ನಿದ್ದೆಗೆ ಜಾರಿದ ಮಗು..! ➤ ಅಗ್ನಿಶಾಮಕ ಸಿಬ್ಬಂದಿಗಳ ಸಹಾಯದಿಂದ ಲಾಕ್ ಓಪನ್

(ನ್ಯೂಸ್ ಕಡಬ) newskadaba.com ಪುತ್ತೂರು, ಡಿ. 18. ವೈದ್ಯರ ಕೋಣೆಯೊಳಗೆ ಮಗುವೊಂದು ಚಿಲಕ ಹಾಕಿಕೊಂಡಿದ್ದು, ಎಷ್ಟು ಕರೆದರೂ ಮಗು ಸ್ಪಂದಿಸದೇ ಇದ್ದ ಕಾರಣ ಅಗ್ನಿಶಾಮಕ ದಳದ ಸಿಬ್ಬಂದಿಗಳನ್ನು ಕರೆದು ಬಾಗಿಲಿನ ಲಾಕ್ ಮುರಿದು ಕೊಠಡಿಯೊಳಗೆ ಪ್ರವೇಶಿಸಿದ ಘಟನೆ ಶನಿವಾರದಂದು ಪುತ್ತೂರಿನ ಕಲ್ಲಾರೆಯ ಕಾನಾವು ಕಟ್ಟಡದಲ್ಲಿ ನಡೆದಿದೆ.


ವೈದ್ಯರ ಮಗುವೊಂದು ವೈದ್ಯರ ಕೋಣೆಯೊಳಗೆ ಚಿಲಕ ಹಾಕಿಕೊಂಡು ಮಲಗಿದ್ದು, ಎಷ್ಟು ಕರೆದರೂ ಸ್ಪಂದಿಸದೇ ಇದ್ದಾಗ ಗಾಬರಿಗೊಂಡ ವೈದ್ಯರು ತಕ್ಷಣ ಅಗ್ನಿಶಾಮಕ ದಳದ ಸಿಬ್ಬಂದಿಗೆ ಮಾಹಿತಿ ನೀಡಿದ್ದು, ತಕ್ಷಣವೇ ಆಗಮಿಸಿದ ಸಿಬ್ಬಂದಿಗಳು ಕೊಠಡಿಯ ಲಾಕ್ ಮುರಿದು ಒಳಗೆ ಪ್ರವೇಶಿಸಲು ಅನುವು ಮಾಡಿಕೊಟ್ಟರು ಎನ್ನಲಾಗಿದೆ.

Also Read  ತಿರುಪತಿ ತಿಮ್ಮಪ್ಪನ ಕ್ಷೇತ್ರದಲ್ಲಿ ಮತ್ತೊಂದು ಅವಘಡ: ಲಡ್ಡು ಕೌಂಟರ್‌ಗಳಲ್ಲಿ ಬೆಂಕಿ

 

error: Content is protected !!
Scroll to Top