ಉಪ್ಪಿನಂಗಡಿ: ಸ್ನಾನಕ್ಕೆಂದು ನದಿಗಿಳಿದು ಕಣ್ಮರೆಯಾಗಿದ್ದ ಯುವಕನ ಮೃತದೇಹ ಪತ್ತೆ..!

(ನ್ಯೂಸ್ ಕಡಬ) newskadaba.com ಉಪ್ಪಿನಂಗಡಿ, ಡಿ. 04. ಕಳೆದ ಮೂರು ದಿನಗಳ ಹಿಂದೆ ಇಲ್ಲಿನ ಬೊಳ್ಳಾರು ಎಂಬಲ್ಲಿ ನೇತ್ರಾವತಿ ನದಿಯಲ್ಲಿ ಸ್ನಾನ ಮಾಡಲೆಂದು ಇಳಿದ ಯುವಕನೋರ್ವ ನೀರಿನಲ್ಲಿ ಕೊಚ್ಚಿಹೋಗಿ ಕಣ್ಮರೆಯಾಗಿದ್ದು, ಇದೀಗ ಅಗ್ನಿಶಾಮಕ ದಳ ಸಿಬ್ಬಂದಿಗಳ ನಿರಂತರ ಹುಡುಕಾಟದಿಂದ ಯುವಕನ ಮೃತದೇಹವು ಪೆರ್ನೆ ಸಮೀಪ ಬಿಳಿಯೂರು ಎಂಬಲ್ಲಿ ನದಿ ದಡದಲ್ಲಿ ಪತ್ತೆಯಾಗಿದೆ.

ಮೃತ ಯುವಕನನ್ನು ಸ್ವರ್ಣ ಭೂಮಿ ಬೋರ್ ವೆಲ್ ಕಾರ್ಮಿಕ ಸುಕ್ಮೋ ರಾಮ್ ಗೋವಡೆ ಎನ್ನಲಾಗಿದೆ. ಕಳೆದ ಮೂರು ದಿನಗಳ ಹಿಂದೆ ಬೊಳ್ಳಾರು ಎಂಬಲ್ಲಿ ನದಿ ನೀರಿನಲ್ಲಿ ಸ್ನಾನ ಮಾಡುವ ವೇಳೆ ನೀರಿನಲ್ಲಿ ಕೊಚ್ಚಿ ಹೋಗಿದ್ದರು.

Also Read  ನಾಪತ್ತೆಯಾಗಿದ್ದ ಬಾಲಕ ಸೆಫ್ಟಿಂಕ್ ಟ್ಯಾಂಕ್‌ ನಲ್ಲಿ ಶವವಾಗಿ ಪತ್ತೆ..!

 

 

error: Content is protected !!
Scroll to Top