ಮಂಗಳೂರು: ರೈಲಿನಡಿಗೆ ಬೀಳುತ್ತಿದ್ದ ವಿದ್ಯಾರ್ಥಿನಿಯನ್ನು ಕಾಪಾಡಿದ ಕಾಲೇಜು ವಿದ್ಯಾರ್ಥಿ..! ➤ ವಿದ್ಯಾರ್ಥಿಯ ಸಮಯಪ್ರಜ್ಞೆಗೆ ಸಾರ್ವಜನಿಕರಿಂದ ವ್ಯಾಪಕ ಪ್ರಶಂಸೆ

(ನ್ಯೂಸ್ ಕಡಬ) newskadaba.com ಮಂಗಳೂರು, ಡಿ. 03. ಕಾಲು ಜಾರಿ ಚಲಿಸುತ್ತಿದ್ದ ರೈಲಿನಡಿಗೆ ಬೀಳುತ್ತಿದ್ದ ವಿದ್ಯಾರ್ಥಿನಿಯನ್ನು ಕಾಲೇಜು ವಿದ್ಯಾರ್ಥಿಯೋರ್ವ ಸಿನಿಮೀಯ ರೀತಿಯಲ್ಲಿ ರಕ್ಷಿಸಿದ ಘಟನೆ ನಗರದ ಸೆಂಟ್ರಲ್ ರೈಲ್ವೇ ನಿಲ್ದಾಣದಲ್ಲಿ ನಡೆದಿದೆ.


ವಿದ್ಯಾರ್ಥಿನಿಯನ್ನು ರಕ್ಷಿಸಿದ ವಿದ್ಯಾರ್ಥಿಯನ್ನು ಕಾರ್ ಸ್ಟ್ರೀಟ್ ಬಳಿಯ ಕಾಲೇಜು ವಿದ್ಯಾರ್ಥಿ ಮನೀಷ್ ಎನ್ನಲಾಗಿದೆ. ಈತ ಕಾಲೇಜು ಮುಗಿದು ಬಳಿಕ ಮನೆಗೆ ತೆರಳಲು ಸೆಂಟ್ರಲ್ ರೈಲ್ವೇ ನಿಲ್ದಾಣದಲ್ಲಿ ರೈಲು ಹತ್ತಿದ್ದು, ರೈಲು ಚಲಿಸಲಾರಂಭಿಸಿತ್ತು. ಇದೇ ವೇಳೆ ರೈಲನ್ನು ಹತ್ತಲೆಂದು ಬಂದ ವಿದ್ಯಾರ್ಥಿನಿ ಕಾಲು ಜಾರಿ ಬಿದ್ದಿದ್ದಾಳೆ. ಈ ವೇಳೆ ಸಮಯ ಪ್ರಜ್ಞೆ ಮೆರೆದ ಮನೀಷ್ ಕೂಡಲೇ ಆಕೆಯನ್ನು ಹಿಡಿದೆಳೆದಿದ್ದಾನೆ. ಇದರಿಂದ ವಿದ್ಯಾರ್ಥಿನಿ ಪ್ರಾಣಾಪಾಯದಿಂದ ಪಾರಾಗಿದ್ದಾಳೆ.

Also Read  ಆಕಾಶವಾಣಿ ಉದ್ಘೋಷಕ ಸುಳ್ಯದ ಚಿತ್ತರಂಜನ್ ದಾಸ್ ವಿಧಿವಶ

error: Content is protected !!
Scroll to Top