ಮಮತಾ ಬ್ಯಾನರ್ಜಿಯಿಂದ ರಾಷ್ಟ್ರಗೀತೆಗೆ ಅವಮಾನ ➤ ಬಿಜೆಪಿಯಿಂದ ದೂರು

(ನ್ಯೂಸ್ ಕಡಬ) newskadaba.com ಮುಂಬೈ, ಡಿ. 02. ರಾಷ್ಟ್ರಗೀತೆಗೆ ಅವಮಾನ ಮಾಡಿದ್ದಾರೆ ಎಂದು ಆರೋಪಿಸಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿರುದ್ಧ ಬಿಜೆಪಿಯು ದೂರು ದಾಖಲಿಸಿದೆ.

 

ಮುಂಬೈನಲ್ಲಿ ಬುಧವಾರದಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ಮಮತಾ ಬ್ಯಾನರ್ಜಿ ಅವರು ರಾಷ್ಟ್ರಗೀತೆಯ ಕೆಲವು ಸಾಲುಗಳನ್ನು ಹಾಡಿ ಜೈ ಮಹಾರಾಷ್ಟ್ರ ಎಂದು ನಿಲ್ಲಿಸಿದ್ದರು. ಓರ್ವ ಮುಖ್ಯಮಂತ್ರಿಯಾಗಿ ಮಮತಾ ಬ್ಯಾನರ್ಜಿ ಅವರು ಬಂಗಾಳ ಸಂಸ್ಕೃತಿ, ರಾಷ್ಟ್ರಗೀತೆ ಮತ್ತು ರವೀಂದ್ರನಾಥ ಠಾಗೋರ್ ಅವರನ್ನು ಅವಮಾನಿಸಿದ್ದಾರೆ ಎಂದು ಬಿಜೆಪಿ ಬಂಗಾಳ ಘಟಕವು ಆರೋಪಿಸಿದೆ ಎನ್ನಲಾಗಿದೆ.


‘ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ರಾಷ್ಟ್ರಗೀತೆಗೆ ಅವಮಾನ ಮಾಡಿದ್ದಾರೆ. ಅವರಿಗೆ ರಾಷ್ಟ್ರಗೀತೆಯ ಶಿಷ್ಟಾಚಾರ ಗೊತ್ತಿಲ್ಲವೇ ಅಥವಾ ಗೊತ್ತಿದ್ದೂ ಅದನ್ನು ಅವಮಾನಿಸುತ್ತಿದ್ದಾರಾ? ಎಂದು ಬಿಜೆಪಿ ಪಶ್ಚಿಮ ಬಂಗಾಳ ಅಧ್ಯಕ್ಷ ಡಾ. ಸುಕಾಂತ ಮಜುಂದಾರ್ ಟ್ವೀಟ್ ಮಾಡಿದ್ದಾರೆ.

Also Read  ಕಡಬ: ಚಲಿಸುತ್ತಿದ್ದ ಕಾರಿನಲ್ಲಿ ಹಠಾತ್ ಕಾಣಿಸಿಕೊಂಡ ಬೆಂಕಿ ➤ ಸಾರ್ವಜನಿಕರು ನಂದಿಸಿದ್ದರಿಂದ ತಪ್ಪಿತು ಹೆಚ್ಚಿನ ಅಪಾಯ

 

error: Content is protected !!
Scroll to Top