ಸುಬ್ರಹ್ಮಣ್ಯ ಮಠಕ್ಕೆ ಭೇಟಿ ನೀಡಿ ಶ್ರೀಗಳ ಆಶೀರ್ವಾದ ಪಡೆದ ಡಾ. ಸುಧಾಮೂರ್ತಿ

 

(ನ್ಯೂಸ್ ಕಡಬ) newskadaba.com ಸುಬ್ರಹ್ಮಣ್ಯ, ನ. 25. ಇನ್ಫೋಸಿಸ್ ಸಂಸ್ಥೆಯ ಅಧ್ಯಕ್ಷರಾದ ಡಾ. ನಾರಾಯಣ ಮೂರ್ತಿಯವರ ಪತ್ನಿ ಡಾ. ಶ್ರೀಮತಿ ಸುಧಾ ಮೂರ್ತಿಯವರು ಸುಬ್ರಹ್ಮಣ್ಯ ಮಠಕ್ಕೆ ಭೇಟಿ ನೀಡಿ ಆಶೀರ್ವಾದ ಪಡೆದರು.

 

 

ಮಂಗಳವಾರದಂದು ಸುಬ್ರಹ್ಮಣ್ಯಕ್ಕೆ ಆಗಮಿಸಿದ ಅವರು, ಶ್ರೀ ಮಠದಲ್ಲಿ ಆಶ್ಲೇಷ ಬಲಿ ನೆರವೇರಿಸಿದರು. ಇದೇ ಸಂದರ್ಭದಲ್ಲಿ ಸ್ವಾಮಿ ಸನ್ನಿದಿ ಪೂಜಾ ಸಾಮಾಗ್ರಿಗಳ ಮಳಿಗೆ ವತಿಯಿಂದ ಅವರಿಗೆ ಕಿರು ಕಾಣಿಕೆಯೊಂದನ್ನು ನೀಡಲಾಯಿತು. ಶ್ರೀ ಮಠದ ದಿವಾನರಾದ ಶ್ರೀಸುದರ್ಶನ ಜೋಯಿಸ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.

 

error: Content is protected !!
Scroll to Top