ಕಲ್ಲುಗುಡ್ಡೆ: ನಿರಂತರ ಮಳೆಗೆ ಮನೆಯ ಮೇಲ್ಛಾವಣಿ ಕುಸಿತ ➤ ಅಪಾರ ಹಾನಿ

(ನ್ಯೂಸ್ ಕಡಬ) newskadaba.com ಕಡಬ, ನ. 25. ಕಳೆದ ವಾರಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಗೆ ಮನೆಯ ಮೇಲ್ಛಾವಣಿ ಸಂಪೂರ್ಣ ಹಾನಿಗೊಂಡ ಘಟನೆ ಕಲ್ಲುಗುಡ್ಡೆ ಎಂಬಲ್ಲಿ ನಡೆದಿದೆ.

 

ರೆಂಜಿಲಾಡಿ ಗ್ರಾಮದ ನೂಜಿ ಕೆಂಚರಾಣ್ಯ ಎಂಬವರ ಪತ್ನಿ ಕುಂಞಮ್ಮ ಎಂಬವರ ಮನೆಯ ಮೇಲ್ಛಾವಣಿ ಕುಸಿದು, ಹೆಂಚು ಹಾಗೂ ಸಹಿತ ಪೀಠೋಪಕರಣ ನಾಶಗೊಂಡಿದ್ದು, ಘಟನೆಯ ವೇಳೆ ಮನೆ ಮಂದಿ ಹೊರಗಿದ್ದ ಕಾರಣ ಅಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ. ಘಟನಾ ಸ್ಥಳಕ್ಕೆ ನೂಜಿಬಾಳ್ತಿಲ ಗ್ರಾ.ಪಂ. ಅಧ್ಯಕ್ಷೆ ಗಂಗಮ್ಮ, ಉಪಾಧ್ಯಕ್ಷ ಇಮಾನ್ಯುವೆಲ್ ಪಿ.ಜೆ., ಸದಸ್ಯರಾದ ಶ್ರೀಧರಗೌಡ ಗೋಳ್ತಿಮಾರ್, ಕಾರ್ಯದರ್ಶಿ ಗುರುವ ಎಸ್, ಗ್ರಾಮ ಸಹಾಯಕ ದುಗ್ಗಣ್ಣ ಗೌಡ ಮೊದಲಾದವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Also Read  ಗೂಳಿ ತಿವಿದು ಯುವಕ ಮೃತ್ಯು

 

 

error: Content is protected !!
Scroll to Top