ಕರ್ನಾಟಕ ಪತ್ರಕರ್ತರ ಸಂಘ ಪುತ್ತೂರು ತಾಲೂಕು ಘಟಕದ ಅಧ್ಯಕ್ಷರಾಗಿ ಯೂಸುಫ್ ರೆಂಜಲಾಡಿ ಪುನರಾಯ್ಕೆ

(ನ್ಯೂಸ್ ಕಡಬ) newskadaba.com ಪುತ್ತೂರು, ನ. 22. ಕರ್ನಾಟಕ ಪತ್ರಕರ್ತರ ಸಂಘ ಪುತ್ತೂರು ತಾಲೂಕು ಘಟಕದ ಅಧ್ಯಕ್ಷರಾಗಿ ಯೂಸುಫ್ ರೆಂಜಲಾಡಿ ಅವರು ಪುನರಾಯ್ಕೆಗೊಂಡಿದ್ದಾರೆ. ಸಂಘದ ವಾರ್ಷಿಕ ಮಹಾಸಭೆಯು ನವೆಂಬರ್ 20ರಂದು ಪುತ್ತೂರು ಮಾತೃಛಾಯಾ ಸಭಾಭವನದಲ್ಲಿ ನಡೆಯಿತು.


ಸಂಘದ ಪ್ರಧಾನ ಕಾರ್ಯದರ್ಶಿಯಾಗಿ ಲಕ್ಷ್ಮೀ ಕಾಂತ್ ರೈ, ಉಪಾಧ್ಯಕ್ಷರಾಗಿ ಶೈಲಜಾ ಸುದೇಶ್, ಕೋಶಾಧಿಕಾರಿಯಾಗಿ ನರೇಶ್ ಜೈನ್ ಹಾಗೂ ಕಾರ್ಯದರ್ಶಿಯಾಗಿ ಜನಾರ್ಧನ ಮಚ್ಚಿಮಲೆ ಪುನರಾ ಯ್ಕೆಯಾದರು. ಈ ಸಂದರ್ಭದಲ್ಲಿ ಕರ್ನಾಟಕ ಪತ್ರಕರ್ತರ ಸಂಘದ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಸುದೇಶ್ ಕುಮಾರ್, ಬೆಂಗಳೂರು ಘಟಕದ ಸಂಚಾಲಕ ದತ್ತಾತ್ರೇಯ ಹೆಗ್ಡೆ, ಸಂಘದ ಸದಸ್ಯರು ಹಾಗೂ ಪತ್ರಕರ್ತರು ಉಪಸ್ಥಿತರಿದ್ದರು.

Also Read  'ಡಿಕೆಶಿ ರಕ್ತ ಯಾರಿಗೂ ಪ್ರಯೋಜನ ಇಲ್ಲ'       ➤ ಸಿಎಂ ಬೊಮ್ಮಾಯಿ ವ್ಯಂಗ್ಯ

error: Content is protected !!
Scroll to Top