ದ.ಕ. ಕಸಾಪ ಅಧ್ಯಕ್ಷರಾಗಿ ಡಾ.ಎಂ.ಪಿ ಶ್ರೀನಾಥ್ ಆಯ್ಕೆ

(ನ್ಯೂಸ್ ಕಡಬ) newskadaba.com ಸುಳ್ಯ, ನ. 22. ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ನ ನೂತನ ಅಧ್ಯಕ್ಷರಾಗಿ ಡಾ.ಎಂ.ಪಿ. ಶ್ರೀನಾಥ್ ಅವರು ಆಯ್ಕೆಯಾಗಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲಾ ಅಧ್ಯಕ್ಷತೆಗೆ ಭಾನುವಾರದಂದು ನಡೆದ ಚುನಾವಣೆಯಲ್ಲಿ ಡಾ.ಎಂ.ಪಿ.ಶ್ರೀನಾಥ್ 1,489 ಮತಗಳನ್ನು ಪಡೆದು ವಿಜಯಿಯಾಗಿದ್ದಾರೆ. ಪ್ರತಿಸ್ಪರ್ಧಿ ಎಂ.ಆರ್. ವಾಸುದೇವ ಅವರು 534 ಮತಗಳನ್ನು ಪಡೆದಿದ್ದಾರೆ. ಶ್ರೀನಾಥ್ ಅವರು ಸುಳ್ಯದಲ್ಲಿ 219, ಬೆಳ್ತಂಗಡಿ 520, ಮಂಗಳೂರು 192, ಪುತ್ತೂರು 182, ಕಡಬ 46, ವಿಟ್ಲ 54, ಮೂಡಬಿದ್ರೆ 28, ಕೊಕ್ಕಡ 152, ಮೂಲ್ಕಿ 33, ಬಂಟ್ವಾಳ 63 ಮತಗಳು ಪಡೆದರು. ಒಟ್ಟು 1489 ಮತಗಳನ್ನು ಪಡೆದಿದ್ದಾರೆ.

error: Content is protected !!

Join the Group

Join WhatsApp Group