ವಿಧಾನಪರಿಷತ್ ಚುನಾವಣೆ ಸ್ಪರ್ಧೆಯ ನಿರ್ಧಾರದಿಂದ ಹಿಂದೆ ಸರಿದ ಡಾ.ಎಂ.ಎನ್ ರಾಜೇಂದ್ರ ಕುಮಾರ್..!

(ನ್ಯೂಸ್ ಕಡಬ) newskadaba.com ಮಂಗಳೂರು, ನ. 20. ಉಡುಪಿ, ದ.ಕ ಮತಕ್ಷೇತ್ರದಿಂದ ಸ್ಥಳೀಯ ಸಂಸ್ಥೆಗಳ ವಿಧಾನ ಪರಿಷತ್ ಚುನಾವಣೆಗೆ ಸ್ಪರ್ಧಿಸುವ ನಿರ್ಧಾರ ಮಾಡಿದ್ದ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಡಾ.ಎಂ.ಎನ್ ರಾಜೇಂದ್ರ ಕುಮಾರ್ ಅವರು ಇದೀಗ ನಿರ್ಧಾರದಿಂದ ಹಿಂದೆ ಸರಿಯಲು ನಿರ್ಧರಿಸಿದ್ದಾರೆ.

ಉಭಯ ಜಿಲ್ಲೆಗಳ ಸಹಕಾರಿ ಧುರೀಣರ ಒತ್ತಾಯದ ಮೇರೆಗೆ ರಾಜೇಂದ್ರ ಕುಮಾರ್ ಅವರು ಸ್ಪರ್ಧೆಗೆ ನಿರ್ಧರಿಸಿದ್ದು, ನ. 16ರಂದು ಅವರ ಚುನಾವಣಾ ಕಛೇರಿ ಮಂಗಳೂರಿನಲ್ಲಿ ಉದ್ಘಾಟನೆಗೊಂಡಿತ್ತು. ತಾನು ಸಹಕಾರಿ ಕ್ಷೇತ್ರದಲ್ಲಿ ಪಕ್ಷಾತೀತನಾಗಿ ಉಳಿಯುವ ಹಿನ್ನೆಲೆ ಸ್ಪರ್ಧೆಯಿಂದ ಹಿಂದೆ ಸರಿಯಲು ನಿರ್ಧರಿಸಿರುವುದಾಗಿ ಹೇಳಿದ್ದಾರೆ ಎಂದು ವರದಿಯಾಗಿದೆ.

Also Read  ತುಳು ಭಾಷೆ ಉಳಿಯಬೇಕಾದರೆ ತುಳುವರು ಜಾಗೃತರಾಗಬೇಕು: ಎ.ಸಿ.ಭಂಡಾರಿ ► ರಾಮಕುಂಜದಲ್ಲಿ ತುಳು ಕಲಿಯುವ ಮಕ್ಕಳ ರಾಜ್ಯ ಮಟ್ಟದ ರಸಮಂಟಮೆ

error: Content is protected !!
Scroll to Top