ಈಜಲು ತೆರಳಿದ್ದ ಆರು ವಿದ್ಯಾರ್ಥಿಗಳು ನೀರುಪಾಲು..!

(ನ್ಯೂಸ್ ಕಡಬ) newskadaba.com ತೆಲಂಗಾಣ, ನ. 17. ಈಜಲಂದು ನೀರಿಗಿಳಿದ 6 ವಿದ್ಯಾರ್ಥಿಗಳು ನೀರುಪಾಲಾದ ಮನಕಲುಕುವ ಘಟನೆ ತೆಲಂಗಾಣದ ಸಿರ್ಸಿಲ್ಲಾ ಮನೈರ್ ನದಿಯಲ್ಲಿ ನಡೆದಿದೆ.


ವೆಂಕೆಂಪೇಟ ಸರ್ಕಾರಿ ಶಾಲೆಯ ಆರು ಮಂದಿ ವಿದ್ಯಾರ್ಥಿಗಳು ಈಜಲೆಂದು ನೀರಿಗಿಳಿದಿದ್ದು, ಆರು ವಿದ್ಯಾರ್ಥಿಗಳು ಕೂಡಾ ನೀರಿನ ರಭಸಕ್ಕೆ ಕೊಚ್ಚಿಕೊಂಡು ಹೋಗಿದ್ದಾರೆ ಎನ್ನಲಾಗಿದೆ. ತಕ್ಷಣವೇ ಕಾರ್ಯಪ್ರವೃತ್ತರಾದ ಎನ್ ಡಿಆರ್ ಫ್ ತಂಡ ಆರು ಮಂದಿ ವಿದ್ಯಾರ್ಥಿಗಳ ಮೃತದೇಹವನ್ನು ಪತ್ತೆಹಚ್ಚಿದೆ.

Also Read  ವಿಟ್ಲ: ಬೈಕ್ ಅಪಘಾತದಿಂದ ಗಂಭೀರ ಗಾಯಗೊಂಡಿದ್ದ ವ್ಯಕ್ತಿ ಚಿಕಿತ್ಸೆ ಫಲಿಸದೇ ಮೃತ್ಯು

error: Content is protected !!
Scroll to Top